ಕಳೆದ ಸೀಸನ್ ಗಳಿಗಿಂತಲೂ ಈ ಬಾರಿಯ ಕನ್ನಡದ ಬಿಗ್ಬಾಸ್ ರೋಚಕತೆ ಸೃಷ್ಟಿಸುತ್ತಿದೆ. ಈ ಸೀಸನ್ ನಲ್ಲಿ ದಿನಕೊಂದು ತಿರುವು, ಊಹಿಸಲಾರದ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಪ್ರೇಕ್ಷಕರ ಕಟ್ಟಿಹಾಕುತ್ತಲಿದೆ.. ಈಗಾಗಲೇ 68 ದಿನಗಳಾಗಿದ್ದು, ಬಿಗ್ ಬಾಸ್ ವಿನ್ನರ್ ಪಟ್ಟಕ್ಕೇರಲು ಕೆಲವೇ ವಾರಗಳು ಬಾಕಿ ಇವೆ.. ಬಿಗ್ ಬಾಸ್ ಆರಂಭದಿಂದಲೂ ಸಹ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದ್ದು, ಗೌತಮಿ ಮುಂದಿನ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಮೋಕ್ಷಿತಾಗೆ ಕಪಾಳಮೋಕ್ಷ ಆದಂತೆ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ಗಳು ಸಿಕ್ಕಿವೆ. ಮೋಕ್ಷಿತಾ ಪೈ ಅವರು ಧಿಮಾಕು ತೋರಿದರು. ಜನರು ಆದೇಶವನ್ನು ಬದಿಗೊತ್ತಿದರು. ಇದಕ್ಕೆ ಅವರು ಸರಿಯಾದ ಪಾಠ ಕಲಿತಿದ್ದಾರೆ. ತಮಗೆ ಸಿಕ್ಕ ಅವಕಾಶ ಕೈ ಚೆಲ್ಲಿದರು. ಇದು ಅವರಿಗೆ ಮುಳುವಾಗಿ ಹೋಗಿದೆ. ಈ ಅವಕಾಶ ಬಳಕೆ ಮಾಡಿಕೊಂಡ ಗೌತಮಿ ಅವರು ಕ್ಯಾಪ್ಟನ್ ಆಗಿದ್ದಾರೆ! ಇದರಿಂದ ಮೋಕ್ಷಿತಾ ಉರಿದುರಿದು ಹೋಗಿದ್ದಾರೆ.
ಬಿಗ್ ಬಾಸ್ನಲ್ಲಿ ಬಂದ ಅವಕಾಶವನ್ನು ಯಾವತ್ತೂ ಕೈ ಚೆಲ್ಲಬಾರದು. ಹಾಗೆ ಚೆಲ್ಲಿದರೆ ಅದಕ್ಕೆ ದೊಡ್ಡ ದಂಡ ತೆತ್ತಬೇಕಾಗುತ್ತದೆ. ಇದು ಸ್ಪರ್ಧಿಗಳಿಗೆ ಅನೇಕ ಬಾರಿ ಅನುಭವ ಆಗಿದೆ. ಆದಾಗ್ಯೂ ಅನೇಕರು ಮತ್ತೆ ಮತ್ತೆ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಮೋಕ್ಷಿತಾ ಕೂಡ ಇದೇ ತಪ್ಪನ್ನು ಮಾಡಿ ದೊಡ್ಡ ದಂಡ ತೆತ್ತಿದರು.
ಗೌತಮಿ ಗೆದ್ದು ನಾನು ಕ್ಯಾಪ್ಟನ್ ಆಗಬೇಕೆಂಬುದು ಯಾವತ್ತೂ ಇಲ್ಲ’ ಎಂದಿದ್ದಾರೆ ಮೋಕ್ಷಿತಾ. ಇದಕ್ಕೆ ಬಿಗ್ ಬಾಸ್ ಎಚ್ಚರಿಕೆಯನ್ನು ಕೂಡ ನೀಡಿದರು. ಇದಕ್ಕೆ ನೀವು ದೊಡ್ಡ ದಂಡ ತೆತ್ತಬೇಕಾಗುತ್ತದೆ ಎಂದರು. ಕೊನೆಗೆ ಮೋಲ್ಷಿತಾ ಬದಲಾಗಿ ಓರ್ವ ಬೇರೆ ಆಟಗಾರನನ್ನು ಎದುರಾಳಿ ತಂಡದಿಂದ ಆಯ್ಕೆ ಮಾಡಲು ಅವಕಾಶ ನೀಡಲಾಯಿತು. ಆಗ ಎಲ್ಲರೂ ಗೌತಮಿ ಅವರನ್ನು ಆಯ್ಕೆ ಮಾಡಿದರು. ಈಗ ರಿಲೀಸ್ ಆಗಿರೋ ಹೊಸ ಪ್ರೋಮೋದಲ್ಲಿ ಗೌತಮಿ ಕ್ಯಾಪ್ಟನ್ ಆಗಿದ್ದಾರೆ. ಮೋಕ್ಷಿತಾ ಕೊಟ್ಟ ಅವಕಾಶದಿಂದ ಗೌತಮಿಗೆ ಈ ಪಟ್ಟ ಒಲಿದಿದೆ.