ಮೂಕ ಮಗುವಿನ ಸಾವಿಗೆ ನ್ಯಾಯ ದೊರಕಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನಲ್ಲಿ ನಡೆದ 14 ವರ್ಷದ ಹೆಣ್ಣುಮಗುವಿನ ನಿಗೂಢ ಸಾವನ್ನು ಖಂಡಿಸಿ ಸೋಲ್ ಇನ್ಸ್ಪೈರಿಂಗ್ ವತಿಯಿಂದ ಗದಗ ನಗರದ ಪಂಚರ ಹೊಂಡದಿಂದ ಗಾಂಧಿ ಸರ್ಕಲ್‌ವರೆಗೂ ಪಂಜಿನ ಮೆರವಣೆಗೆ ನಡೆಸಲಾಯಿತು.

Advertisement

14 ವರ್ಷದ ಖುಷಿ ಎಂಬ ಮೂಕ ಮಗು ಸಾವನ್ನಪ್ಪಿರುವುದು ಹೆತ್ತ ತಾಯಿಗಷ್ಟೇ ಅಲ್ಲದೆ, ಇಡೀ ಸಮಾಜಕ್ಕೆ ಆಘಾತ ತಂದಿದೆ. ಈ ಕೃತ್ಯವೆಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಮೃತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ವಿಷ್ಣು ಡಿ.ಕವಲೂರ ಆಕ್ರೋಶ ವ್ಯಕ್ತಪಡಿಸಿದರು.

ರವಿ ನರೇಗಲ್ ಮಾತನಾಡಿ, ಸಮಾಜದಲ್ಲಿ ಇಂತಹ ಹೇಯ ಕೃತ್ಯವೆಸಗುವವರನ್ನು ಮಟ್ಟಹಾಕಬೇಕಿದೆ. ಮೃತ ಕುಟುಂಬಸ್ಥರಿಗೆ ರೂ. 50 ಲಕ್ಷ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ತೇಜಸ್ ಕನವಳ್ಳಿ ಮಾತನಾಡಿ, ರಾಮನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿತರನ್ನು ಬಂಧಿಸಿ ಮುಗ್ದ ಮಗುವಿನ ಸಾವಿಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚಿನ್ನು ಬಳ್ಳಾರಿ, ಪವನ ಮುಳಗುಂದ, ಕಿರಣ ಮುಳಗುಂದ, ರವಿ ಲಕ್ಕಣ್ಣವರ, ಶಶಾಂಕ ಅರಮನಿ, ಶ್ರೀನಿವಾಸ ಮಡಿವಾಳರ, ನಾಗರಾಜ ಬಂಡಿವಡ್ಡರ, ಜಯರಾಜ ಬೂದಗುಂಪ, ಮನೋಜ ಕಣವಿ, ಮಲ್ಲಿಕಾರ್ಜುನ ಶಟ್ಟರ್, ಆಕಾಶ ಬಳ್ಳೊಳ್ಳಿ, ಜೀವನ, ಹರ್ಷಾ ಹಡಪದ, ಸಂತೋಷ ಕುಂಬಾರ, ಭರತ್ ಸಂಗನಾಳ, ಪ್ರಜ್ವಲ್ ಕೊರ್ಲಹಳ್ಳಿ, ಯಶವಂತ ಬಳ್ಳಾರಿ, ನಾಗರಾಜ ಬಾಂಡಗೆ, ಫರಾನ ಸವಣೂರ, ಕಿರಣ ಪಾಟೀಲ, ರುದ್ರೇಶ ಅಂಗಡಿ, ಗಣೇಶ ಗುಡಿಮನಿ, ರಾಮು, ಹೃತಿಕ ಮಾದಗುಂಡಿ, ಶ್ರೀನಿವಾಸ ಭಾಂಡಗೆ, ನಿಖಿಲ ಮಾನೇದ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here