ಗಝಲ್ ಚೌಕಟ್ಟಿನೊಳಗಿನ ನಿರ್ಜೀವ ಗೊಂಬೆಯಲ್ಲ

0
kasapa
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಎರಡು ವಿಭಿನ್ನ ಭಾಷೆಗಳು ಕಾವ್ಯವನ್ನು ಹೇಗೆ ಸತ್ವಯುತಗೊಳಿಸಿಕೊಂಡು ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತವೆ ಮತ್ತು ಭಾಷೆಯ ಸರಹದ್ದುಗಳನ್ನೂ ಮೀರಿ ಬೆಳೆಯುತ್ತವೆ ಎನ್ನುವುದಕ್ಕೆ ಗಝಲ್ ಪ್ರಕಾರ ಉದಾಹರಣೆಯಾಗಿ ನಿಲ್ಲುತ್ತದೆ. ಅರಬ್ಬಿ ಮೂಲದಿಂದ ಹೊರಟು ಉರ್ದುವಿನ ಕಾವ್ಯ ರಾಣಿಯಾಗಿ ಮೆರೆದ ಗಝಲ್ ಉರ್ದು ಬಾಷೆಯನ್ನೇ ಪ್ರೇಮಮಯ, ಸಂಗೀತಮಯ, ಸುಕೋಮಲವನ್ನಾಗಿಸಿತು ಎನ್ನುವುದರಲ್ಲಿ ಸಂಶಯವಿಲ್ಲ ಎಂದು ಹಿರಿಯ ಸಾಹಿತಿ ಎ.ಎಸ್. ಮಕಾಂದಾರ ಅಭಿಪ್ರಾಯಪಟ್ಟರು.

Advertisement

ಅವರು ಗದಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳಗೌರಿ ಮಲ್ಲಿಕಾರ್ಜುನಯ್ಯ ಹಿರೇಮಠ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ಸಾಹಿತ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕಾ ಕ.ಸಾ.ಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ಮಾತನಾಡಿ, ಕಾವ್ಯ ಕೃಷಿಗೆ ಭಾಷೆಗಳು ಬೇಲಿಯಾಗುವುದಿಲ್ಲ. ಒಂದು ಭಾಷೆಯ ಸೌಂದರ್ಯವನ್ನು ಇನ್ನೊಂದು ಭಾಷೆ ತನ್ನದೇ ಆದ ರೀತಿಯಲ್ಲಿ ತೆಗೆದುಕೊಂಡು ಸೃಜನಶೀಲತೆಗೆ ಕಾರಣವಾಗುತ್ತದೆ. ಕನ್ನಡವು ಅಂತಹ ಒಂದು ವಿಶಿಷ್ಟ ಭಾಷೆಯಾಗಿದ್ದು, ಹೊಸತನವನ್ನು ಮೈಗೂಡಿಸಿಕೊಳ್ಳುವಲ್ಲಿ ಸದಾ ಉತ್ಸುಕತೆ ತೋರುತ್ತದೆ. ಹೀಗಾಗಿ ಇಂದಿನ ದಿನಗಳಲ್ಲಿಯ ಜಪಾನೀ ಮೂಲದಿಂದ ಹೈಕುಗಳು, ಉರ್ದು ಮೂಲದಿಂದ ಗಝಲ್‌ಗಳನ್ನು, ರುಬಾಯಿಗಳನ್ನು ತನ್ನತ್ತ ಆಕರ್ಷಿಸುತ್ತ ಕನ್ನಡ ಸಾಹಿತ್ಯ ವಿಫುಲತೆಯನ್ನು ಪಡೆಯಲು ಪ್ರಯತ್ನಿಸುತ್ತಿದೆ. ಈ ದಿಸೆಯಲ್ಲಿ ಕಾವ್ಯ ಕೃಷಿಯಲ್ಲಿ ತೊಡಗಿರುವ ಇಂದಿನ ಯುವ ಜನತೆ ಹೊಸ ಬೆಳೆಯನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಲಿ. ಆ ಮೂಲಕ ಭಾಷೆ ಇನ್ನಷ್ಟು ಹೊಸತನ ತುಂಬಿಕೊಳ್ಳುವಂತಾಗಲಿ ಎಂದು ಹೇಳಿದರು.

ಬಳಗಾನೂರಿನ ಶ್ರೀ.ಚ. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್. ಪುರಾಣಿಕಮಠ ಸ್ವಾಗತಿಸಿದರು.

ಡಾ. ರಾಜೇಂದ್ರ ಗಡಾದ, ರಾಜಶೇಖರ ಕಾಲವಾಡಮಠ, ನೀಲಮ್ಮ ಅಂಗಡಿ, ಶಾರದಾ ಬಾಣದ, ಹೊನ್ನಾದೇವಿ ಕೆ.ಜೆ, ಪದ್ಮಾ ಕಬಾಡಿ, ಶಿಲ್ಪಾ ಮ್ಯಾಗೇರಿ, ಗೀತಾ ಹೂಗಾರ, ಭಾಗ್ಯಶ್ರೀ ಹುರಕಡ್ಲಿ, ಸುನೀಲ ನಾಯಕ, ಮಂಗಳಗೌರಿ ಹಿರೇಮಠ, ದೀನಬಂಧು ಆದಿ, ಲತಾ ಮಾಂಡ್ರೆ, ರವಿ ದೇವರಡ್ಡಿ, ಶಶಿ ಶಿವಶಿಂಪಿಗೇರ್, ಮಧುರಾಜ್ ರಾಂಪುರ, ತಮ್ಮ ಗಝಲ್ಗಳನ್ನು ವಾಚನ ಮಾಡಿದರು.

ಪ್ರೇಮಾ ಗುಳಗೌಡರ, ಮಂಜುಳಾ ಹೀರೇಮಠ, ಉಮಾದೇವಿ ಹಿರೇಮಠ, ಮಲ್ಲಿಕಾರ್ಜುನಯ್ಯ ಹಿರೇಮಠ, ಕಪ್ಪತ್ತಯ್ಯ ಶಿವಶಿಂಪಿಗೇರ್, ಚಿತ್ರಾ ಹಿರೇಮಠ, ಮೇಘಾ ಎಸ್. ಉಪಸ್ಥಿತರಿದ್ದರು. ತಾಲೂಕ ಕ.ಸಾ.ಪ ಕೋಶಾಧ್ಯಕ್ಷೆ ಪಾರ್ವತಿ ಬೇವಿನಮರದ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಬೇಂದ್ರೆ ನಿರೂಪಿಸಿದರು. ಸಹ ಕಾರ್ಯದರ್ಶಿ ಜ್ಯೋತಿ ಹೇರಲಗಿ ವಂದಿಸಿದರು.

ಕಾರ್ಯಕ್ರಮದಲ್ಲಿ `ಕನ್ನಡ ಸಾಹಿತ್ಯದಲ್ಲಿ ಗಝಲ್ ಕಾವ್ಯ’ ಎನ್ನುವ ವಿಷಯದಲ್ಲಿ ಉಪನ್ಯಾಸ ನೀಡಿದ ಕವಿ ಡಾ. ವಿನಾಯಕ ಕಮತದ, ಇಡೀ ಗಝಲ್ ಕಾವ್ಯದ ವಿವರವನ್ನು ನೀಡುತ್ತ ಕವಿಯಾದವನು ಹೇಗೆ ಗಝಲ್ ರಚಿಸಬೇಕು ಎಂಬುದರ ಕುರಿತು ವಿವರಣೆ ನೀಡಿದರು. ತಮ್ಮ ಸ್ವರಚಿತ ಗಝಲ್‌ಗಳನ್ನು ವಾಚಿಸುತ್ತ, ಗಝಲ್ ಚೌಕಟ್ಟಿನೊಳಗಿನ ನಿರ್ಜೀವ ಗೊಂಬೆಯಲ್ಲ, ಅದಕ್ಕೆ ಜೀವವಿದೆ. ಹೀಗಾಗಿ ಗಝಲ್ ಬರೆಯುವುದೆಂದರೆ ಅದೊಂದು ಧ್ಯಾನಸ್ಥ ಸ್ಥಿತಿ. ಬಾಹ್ಯ ಲಕ್ಷಣಗಳಿಗೆ ಗಮನ ಕೊಡುವಷ್ಟೇ ಅದರ ಗೀತಮಯ ಸ್ವರೂಪ, ಭಾವತೀವ್ರತೆಗೂ ಮಹತ್ವ ನೀಡಬೇಕಾಗುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here