ದುಡ್ಡು ಕೊಡಿ ಮನೆ ಪಡಿ, ಇದು ಕಾಂಗ್ರೆಸ್ ಹೊಸ ಘೋಷವಾಕ್ಯ: ಪ್ರಹ್ಲಾದ್ ಜೋಶಿ!

0
Spread the love

ಹುಬ್ಬಳ್ಳಿ:- ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ದುಡ್ಡು ಕೊಡಿ ಮನೆ ಪಡಿ, ಇದು ಕಾಂಗ್ರೆಸ್ ಹೊಸ ಘೋಷವಾಕ್ಯ. ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಗುತ್ತಿಗೆದಾರರು ಮಾಡಿರುವ 60%​ ಕಮಿಷನ್​ ಆರೋಪ ಸರಿಯಿದೆ ಎಂದಿದ್ದಾರೆ. 6 ತಿಂಗಳಲ್ಲಿ ಅಧಿಕಾರದಿಂದ ಇಳಿಯುತ್ತೇನೆಂದು ಸಿಎಂಗೆ ಅನ್ನಿಸಿದೆ, ಹಾಳಾಗಿ ಹೋಗಲಿ ಅಂತಾ ಸಿದ್ದರಾಮಯ್ಯ ಸುಮ್ಮನಾಗಿದ್ದಾರೆ. ಸಂತೋಷ್ ಲಾಡ್​ ಕೇವಲ ಒಬಾಮಾ, ಟ್ರಂಪ್​ ಬಗ್ಗೆ ಮಾತನಾಡುತ್ತಾರೆ. ಸಚಿವಸ್ಥಾನ ಉಳಿಸಿಕೊಳ್ಳಲು ಮೋದಿಗೆ ಸಂತೋಷ್ ಲಾಡ್ ಬೈಯುತ್ತಾರೆ ಎಂದು ಹರಿಹಾಯ್ದಿದ್ದಾರೆ.

Advertisement

ಇನ್ನೂ ಚಕ್ರವರ್ತಿ ಸೂಲಿಬೆಲೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡಿದ ಪೊಲೀಸ್ ಅಧಿಕಾರಿ ತಲೆಯಲ್ಲಿ ಬುದ್ಧಿ ಇಲ್ಲ. ರಾಜಕೀಯ ಮಾತಾಡಬಾರದು ಅಂತ ಹೇಳಿದ್ದಾರೆ. ನಾವು ಮಾತಾಡದೇ ಪೊಲೀಸರು ರಾಜಕೀಯ ಮಾತಾಡುತ್ತಾರಾ? ಔರಂಗಜೇಬನ ಬಗ್ಗೆ ಮಾತನಾಡಿದರೆ ರಾಜಕರಣವಾಗುತ್ತಾ? ಸಿದ್ದರಾಮಯ್ಯರ ತುಷ್ಟೀಕರಣ ಬಗ್ಗೆ ಮಾತಾನಾಡಿದರೆ ರಾಜಕಾರಣವಾಗುತ್ತಾ? ರಾಜ್ಯವನ್ನು ಮತಾಂಧ ಕೇಂದ್ರವಾಗಿ ಬದಲಾಯಿಸುತ್ತಿದ್ದಾರೆ. ಬಿಜೆಪಿ ದೊಡ್ಡ ಪಾರ್ಟಿ, ನೀವು ಹಿಂಗೆ ಮಾಡಿದರೆ ನಾವು ಸುಮ್ಮನಿರಲ್ಲ. ಅವರು ಕೊಲೆ ಮಾಡಿದರೂ ನಡೆಯುತ್ತದೆ. ಮತಾಂಧ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಪರವಾಗಿದೆ ಎಂದು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here