ಕಾಡಾನೆ ಜೊತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಅವಘಡ: ಸ್ಥಳದಲ್ಲೇ ಓರ್ವ ದುರ್ಮರಣ!

0
Spread the love

ಮಹಾರಾಷ್ಟ್ರ:- ಇಲ್ಲಿನ ಗಡ್ಚಿರೋಲಿ ಅಬಾಪುರ ಅರಣ್ಯದಲ್ಲಿ ವ್ಯಕ್ತಿಯೋರ್ವ ಕಾಡಾನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿದ ಘಟನೆ ಜರುಗಿದೆ.

Advertisement

ಮೃತ ವ್ಯಕ್ತಿಯನ್ನು ಶ್ರೀಕಾಂತ್​ ರಾಮಚಂದ್ರ ಎಂದು ಗುರುತಿಸಲಾಗಿದೆ. ಈತ ತನ್ನ ಮತ್ತಿಬ್ಬರು ಸ್ನೇಹಿತರೊಂದಿಗೆ ಕಾಡಾನೆ ವೀಕ್ಷಿಸಲು ಹೋಗುತ್ತಾನೆ. ಈ ವೇಳೆ ಕಾಡಾನೆ ಕಂಡಾಗ ಮೊಬೈಲ್​ ತೆಗೆದು ಸೆಲ್ಫಿ ಕ್ಲಿಕ್ಕಿಸಲು ಮುಂದಾಗುತ್ತಾನೆ. ಅಷ್ಟರಲ್ಲಿ ಕಾಡಾನೆ ದಾಳಿ ಮಾಡುತ್ತದೆ.

23 ವರ್ಷದ ಶ್ರೀಕಾಂತ್ ಸಾತ್ರೆ ಗಡ್ಚಿರೋಲಿ ಜಿಲ್ಲೆಯವನಾಗಿದ್ದು, ಕೇಬಲ್​ ಅಳವಡಿಕೆಯ ಕೆಲಸ ಮಾಡಿಕೊಂಡಿದ್ದನು. ಕಾಡಾನೆ ವೀಕ್ಷಿಸಲೆಂದು ನವೆಂಗಾಂವ್​ನಿಂದ ಸ್ನೇಹಿತರೊಂದಿಗೆ ಬಂದಿದ್ದಾನೆ.

ಚಿತ್ತಗಾಂಗ್​ ಮತ್ತು ಗಡ್ಚಿರೋಲಿ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳಿಂದ ಕಾಡಾನೆ ಸಂಚರಿಸುತ್ತಿತ್ತು. ಮುಟ್ನೂರ್​ ಅರಣ್ಯ ಪ್ರದೇಶದ ಅಬಾಪುರದಲ್ಲಿ ಕಾಡಾನೆ ಓಡಾಟ ಸ್ಥಳೀಯರ ಕಣ್ಣಿಗೆ ಕಂಡಿದೆ. ಇದನ್ನು ನೋಡಲೆಂದು ಶ್ರೀಕಾಂತ್​ ತನ್ನ ಸ್ನೇಹಿತರೊಂದಿಗೆ ಬಂದಿದ್ದಾನೆ. ಕಾಡಾನೆ ಕಂಡು ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾನೆ. ಈ ವೇಳೆ ಕಾಡಾನೆ ತುಳಿದು ಆತ ಸಾವಿಗೀಡಾಗಿದ್ದಾನೆ.


Spread the love

LEAVE A REPLY

Please enter your comment!
Please enter your name here