ವಿಜಯಸಾಕ್ಷಿ ಸುದ್ದಿ, ಗದಗ: ಕನಕದಾಸ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ತಿಮ್ಮಾಪೂರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Advertisement
ಭೀಮವ್ವ ಜೋಗಿನ (ಶೇ. 84.8) ಪ್ರಥಮ ಸ್ಥಾನ, ಪವಿತ್ರಾ ಸತ್ಯಪ್ಪನವರ (ಶೇ. 80.4) ದ್ವಿತೀಯ ಸ್ಥಾನ, ಅಶ್ವಿನಿ ಬಿಚಗಲ್ಲ್ (ಶೇ. 78.8) ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾದ ಡಾ. ಬಿ.ಎಫ್. ದಂಡಿನ, ಕಾರ್ಯದರ್ಶಿ ರವೀಂದ್ರನಾಥ ದಂಡಿನ, ಸಹ ಕಾರ್ಯದರ್ಶಿ ಪುನೀತ್ ಬೆನಕನವಾರಿ, ಪ್ರಾಚಾರ್ಯ ವೀರಣ್ಣ ಕಮತರ, ಮುಖ್ಯೋಪಾಧ್ಯಾಯ ಆರ್.ಪಿ. ಕುರಡಗಿ, ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಮತ್ತು ಶಾಲೆಯ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.