ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿ ಉತ್ಸವದಲ್ಲಿ ಸರ್ಕಾರಿ ಶಾಲೆ ಮಕ್ಕಳ ಕನಸು ನನಸಾಗಿದೆ.
ಬೈ ಸ್ಕೈ ವೀಕ್ಷಣೆಗೆ ಹಂಪಿಗೆ ಬಂದ 60ಕ್ಕೂ ಹೆಚ್ಚು ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಉಚಿತವಾಗಿ ಹೆಲಿಕಾಪ್ಟರ್ ರೈಡ್ ಮಾಡಿಸಿದರು.
ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಮಕ್ಕಳ ಆಸೆ ಕೇಳಿದ ಸಚಿವರು, “ನೀವು ಎಲ್ಲರೂ ಹಾರ್ಬೇಕೆ?” ಎಂದು ಪ್ರಶ್ನಿಸಿದರು. ಎಲ್ಲಾ ಮಕ್ಕಳು ಒಟ್ಟಿಗೆ ಹೌದು ಎಂದಾಗ, ತಮ್ಮ ಖರ್ಚಿನಲ್ಲಿ ಮಕ್ಕಳಿಗೆ ರೈಡ್ ವ್ಯವಸ್ಥೆ ಮಾಡಿದ್ದಾರೆ.
ಮಕ್ಕಳು ಆಕಾಶಕ್ಕೆ ಹಾರಿದ ಸಂಭ್ರಮವನ್ನು ನೋಡಿದ ಪೋಷಕರು ಹರ್ಷದ ಕಣ್ಣೀರು ಸುರಿಸಿದರು. ಮಕ್ಕಳಿಗೆ ಸಿಕ್ಕ ಈ ವಿಶೇಷ ಅನುಭವ ಉತ್ಸವವನ್ನು ಮತ್ತಷ್ಟು ಸ್ಮರಣೀಯವನ್ನಾಗಿ ಮಾಡಿತು.



