ಬೆಂಗಳೂರು:- ಕರ್ನಾಟಕ ಬಿಟ್ಟು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತೊಲಗಬೇಕು ಎಂದು ದಿನೇಶ್ ಗುಂಡೂರಾವ್ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯಪಾಲರ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಾವು ಉಪ್ಪೂ ತಿಂದಿಲ್ಲ, ನೀರೂ ಕುಡಿಯಲ್ಲ. ಈ ರಾಜ್ಯಪಾಲ ಕರ್ನಾಟಕ ಬಿಟ್ಟು ತೊಲಗಬೇಕು ಅಂತ ಹೋರಾಟ ಕೂಡ ಮಾಡಬೇಕಾಗುತ್ತದೆ. ಥಾವರ್ ಚಂದ್ ಗೆಹ್ಲೋಟ್ ಘನತೆ ಇಲ್ಲದ ರಾಜ್ಯಪಾಲರು ಎಂದರು.
ಭ್ರಷ್ಟಾಚಾರದಲ್ಲಿ ಬಿಎಸ್ವೈ ಪುತ್ರ ವಿಜಯೇಂದ್ರ ಪಿಹೆಚ್ಡಿ ಮಾಡಿದ್ದಾರೆ. ದೇಶದಲ್ಲಿಯೇ ಅತಿ ದೊಡ್ಡ ಭ್ರಷ್ಟಾಚಾರಿ ಬಿ.ಎಸ್.ಯಡಿಯೂರಪ್ಪ. ಬ್ಲ್ಯಾಕ್ಮೇಲ್ ನೈಪುಣ್ಯತೆ ಇರುವ ಏಕೈಕ ವ್ಯಕ್ತಿ ಹೆಚ್. ಡಿ.ಕುಮಾರಸ್ವಾಮಿ ಎಂದು ಆರೋಪ ಮಾಡಿದರು.
ಕಳ್ಳರ ಕೂಟ ಸೇರಿಕೊಂಡು ಕುಮಾರಸ್ವಾಮಿ ಷಡ್ಯಂತ್ರ ಮಾಡಿದ್ದಾರೆ. ಭ್ರಷ್ಟಾಚಾರ ಮತ್ತು ವಿಜಯೇಂದ್ರ ಬೇರೆ ಬೇರೆ ಅಲ್ಲ, ಎರಡೂ ಒಂದೇ. ಭ್ರಷ್ಟಾಚಾರದಲ್ಲಿಯೇ ಹುಟ್ಟಿದವರು, ಭ್ರಷ್ಟಾಚಾರದಲ್ಲಿಯೇ ಬೆಳೆದವರು ಎಂದು ಕಿಡಿ ಕಾರಿದರು.