ಕರ್ನಾಟಕ ಬಿಟ್ಟು ರಾಜ್ಯಪಾಲ ತೊಲಗಬೇಕು: ಗುಂಡೂರಾವ್ ಆಕ್ರೋಶ

0
Spread the love

ಬೆಂಗಳೂರು:- ಕರ್ನಾಟಕ ಬಿಟ್ಟು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತೊಲಗಬೇಕು ಎಂದು ದಿನೇಶ್ ಗುಂಡೂರಾವ್ ಆಕ್ರೋಶ ಹೊರ ಹಾಕಿದ್ದಾರೆ.

Advertisement

ರಾಜ್ಯಪಾಲರ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಾವು ಉಪ್ಪೂ ತಿಂದಿಲ್ಲ, ನೀರೂ ಕುಡಿಯಲ್ಲ. ಈ ರಾಜ್ಯಪಾಲ ಕರ್ನಾಟಕ ಬಿಟ್ಟು ತೊಲಗಬೇಕು ಅಂತ ಹೋರಾಟ ಕೂಡ ಮಾಡಬೇಕಾಗುತ್ತದೆ. ಥಾವರ್​ ಚಂದ್​ ಗೆಹ್ಲೋಟ್ ಘನತೆ ಇಲ್ಲದ ರಾಜ್ಯಪಾಲರು ಎಂದರು.

ಭ್ರಷ್ಟಾಚಾರದಲ್ಲಿ ಬಿಎಸ್​ವೈ ಪುತ್ರ ವಿಜಯೇಂದ್ರ ಪಿಹೆಚ್​ಡಿ ಮಾಡಿದ್ದಾರೆ. ದೇಶದಲ್ಲಿಯೇ ಅತಿ ದೊಡ್ಡ ಭ್ರಷ್ಟಾಚಾರಿ ಬಿ.ಎಸ್.ಯಡಿಯೂರಪ್ಪ. ಬ್ಲ್ಯಾಕ್​ಮೇಲ್​ ನೈಪುಣ್ಯತೆ ಇರುವ ಏಕೈಕ ವ್ಯಕ್ತಿ ಹೆಚ್​. ಡಿ.ಕುಮಾರಸ್ವಾಮಿ ಎಂದು ಆರೋಪ ಮಾಡಿದರು.

ಕಳ್ಳರ ಕೂಟ ಸೇರಿಕೊಂಡು ಕುಮಾರಸ್ವಾಮಿ ಷಡ್ಯಂತ್ರ ಮಾಡಿದ್ದಾರೆ. ಭ್ರಷ್ಟಾಚಾರ ಮತ್ತು ವಿಜಯೇಂದ್ರ ಬೇರೆ ಬೇರೆ ಅಲ್ಲ, ಎರಡೂ ಒಂದೇ. ಭ್ರಷ್ಟಾಚಾರದಲ್ಲಿಯೇ ಹುಟ್ಟಿದವರು, ಭ್ರಷ್ಟಾಚಾರದಲ್ಲಿಯೇ ಬೆಳೆದವರು ಎಂದು ಕಿಡಿ ಕಾರಿದರು.


Spread the love

LEAVE A REPLY

Please enter your comment!
Please enter your name here