ಜನತೆಗೆ ನವರಾತ್ರಿ ಉಡುಗೊರೆ ಜಿಎಸ್‌ಟಿ-2.0

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಜನತೆಗೆ ಕೇಂದ್ರ ಸರ್ಕಾರ ನವರಾತ್ರಿ ಉಡುಗೊರೆ ನೀಡಿದೆ. ಮಧ್ಯಮ ವರ್ಗಕ್ಕೆ ಆರ್ಥಿಕ ನಿರಾಳತೆ ಒದಗಿಸುವ ಮಹತ್ವಾಕಾಂಕ್ಷೆಯಿಂದ ಜಿಎಸ್‌ಟಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಿದ ಕೇಂದ್ರ ಸರ್ಕಾರದ ನಡೆ ವ್ಯಾಪಾರಸ್ತರಿಗೆ, ಮಧ್ಯಮ ವರ್ಗದವರಿಗೆ ನೀಡಿದ ಕೊಡುಗೆಯಾಗಿದೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿರವರು ದೀಪಾವಳಿಗೆ ಜಿಎಸ್‌ಟಿ ಗಿಫ್ಟ್ ನೀಡುವುದಾಗಿ ಘೋಷಿಸಿದ್ದರೂ ಬುಧವಾರ ಆರಂಭಗೊಂಡ 2 ದಿನಗಳ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಹಾಲಿ ಇದ್ದ 4 ಸ್ಲ್ಯಾಬ್‌ಗಳನ್ನು 2ಕ್ಕೆ ಇಳಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಅದರನ್ವಯ ಶೇ 5, ಶೇ 8 ಸ್ಲ್ಯಾಬ್‌ ಮಾತ್ರ ಉಳಿದುಕೊಳ್ಳಲಿದೆ. ಜೀವವಿಮೆ, ಆರೋಗ್ಯ ವಿಮೆಯನ್ನು ಶೂನ್ಯ ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಕೋಟ್ಯಾಂತರ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಹೊಸ ತೆರಿಗೆ ಪದ್ಧತಿ ಸೆ. 22ರಿಂದಲೇ ದೇಶದಲ್ಲಿ ಅನುಷ್ಠಾನಗೊಳ್ಳಲಿದೆ. ಎಂದು ರಾಜು ಕುರುಡಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here