ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರತಿಯೊಂದು ಯಶಸ್ಸಿನ ಹಿಂದೆಯೂ ಗುರು ಕೃಪೆ ಇದ್ದೇ ಇರುತ್ತದೆ ಎಂದು ಶಿಕ್ಷಕ ಎಂ.ಎ. ಮೇಗಲಮನಿ ಹೇಳಿದರು.
ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ. 1ರಲ್ಲಿ ಹಡಪದ ಅಪ್ಪಣ್ಣ ಜಯಂತಿ ಹಾಗೂ ಗುರುಪೂರ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನಲ್ಲಿ ನಾವು ಎಷ್ಟೇ ಎತ್ತರಕ್ಕೇರಿದರೂ, ಅದರ ಹಿಂದೆ ಗುರುಗಳ ಪ್ರೇರಣೆಯ ಛಾಯೆ ಇದ್ದೇ ಇರುತ್ತದೆ. ಆದ್ದರಿಂದ ಗುರುಗಳಿಗೆ ಸಮಾಜದಲ್ಲಿ ವಿಶೇಷ ಗೌರವ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಗುರುಗಳ ಅನುಸರಣೆ ಮತ್ತು ಉಪದೇಶಗಳು ನಮ್ಮನ್ನು ಉತ್ತಮ ಪ್ರಜೆಗಳಾಗಿಸುವ ಶಕ್ತಿ ಹೊಂದಿವೆ. ಮಕ್ಕಳು ನಿತ್ಯ ಪಾಠ ಭೋಧನೆಯಲ್ಲಿ ಗುರುಗಳನ್ನು ಅನುಕರಿಸಿದರೆ, ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಂ.ಎ. ಕೊಪ್ಪಳ, ಎಚ್.ಆರ್. ಭಜಂತ್ರಿ, ಎಸ್.ಎಚ್. ಉಪ್ಪಾರ, ವೀಣಾ ಟಿ, ವಿ.ಎಂ. ಕಠಿ, ಎಸ್.ವಿ. ಹಿರೇಮಠ, ಎಸ್.ಡಿ. ಪಂಡಿತ, ಕೆ.ಎಂ. ಹೆರಕಲ್ಲ, ಮಂಜುನಾಥ ಕಲ್ಯಾಣಮಠ, ಶಬಾನಾ ಢಾಲಾಯತ, ರೇಣುಕಾ ಪರ್ವತಗೌಡರ, ಕವಿತಾ ಬಿನ್ನಾಳ ಮತ್ತು ರಾಧಾ ಬಾತಾಖಾನಿ ಉಪಸ್ಥಿತರಿದ್ದರು.



