ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ನಿಜಶರಣ ಶ್ರೀ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವವನ್ನು ಆಯೋಜಿಸಲಾಗಿತ್ತು.
ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ, ಶಿಕ್ಷಕ ನೆಮೇಶ ಯರಗುಪ್ಪಿ ಮಾತನಾಡಿ, ತಮ್ಮ ಕ್ಷೌರಿಕ ಕಾಯಕದಲ್ಲಿ ದೇವರನ್ನು ಕಂಡ ಹಡಪದ ಅಪ್ಪಣ್ಣನವರು ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಹಡಪದ ಎಂದರೆ ಕ್ಷೌರಿಕ ಸಾಮಗ್ರಿಗಳನ್ನು ಇಟ್ಟುಕೊಳ್ಳುವ ಚೀಲ ಅಥವಾ ಎಲೆ ಅಡಿಕೆಯ ತಾಂಬೂಲನ್ನು ಇಟ್ಟುಕೊಳ್ಳುವ ಚೀಲ ಎಂತಲೂ ನಂಬಲಾಗಿದೆ. ಸಾಮಾಜಿಕ ಅಸಾಮಾನತೆ, ಅನ್ಯಾಯದ ವಿರುದ್ಧ ಹೋರಾಡುತ್ತಿದ್ದ ಇವರನ್ನು ಬಸವಣ್ಣನವರು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡರು. ಇವರು ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತನಾಮದಿಂದ 250 ವಚನಗಳನ್ನು ರಚಿಸಿದ್ದಾರೆ ಎಂದು ಮಕ್ಕಳಿಗೆ ತಿಳುವಳಿಕೆ ನೀಡಿದರು
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಪ್ರಭಯ್ಯ ಹಸವಿಮಠ, ನಿಜಲಿಂಗಪ್ಪ ಮಾಯಕಾರ, ಅಡುಗೆಯ ಸಿಬ್ಬಂದಿಗಳಾದ ಹುಸೇನಬಿ ನದಾಫ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.