ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಡಪದ ಅಪ್ಪಣ್ಣನವರು 12ನೇ ಶತಮಾನದ ಶಿವಶರಣರಲ್ಲಿ ಅಗ್ರಗಣ್ಯರಾಗಿದ್ದು, ಅಣ್ಣ ಬಸವಣ್ಣನವರ ಬಾಲ್ಯ ಸ್ನೇಹಿತರಾಗಿದ್ದರು. ಬಸವಣ್ಣನವರ ಒಡನಾಡಿಯಾಗಿ, ಮಹಾಮನೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ರಚಿಸಿದ 250 ವಚನಗಳು ಸಮಾಜಕ್ಕೆ ಕನ್ನಡಿಯಂತಿವೆ ಎಂದು ಶಿಕ್ಷಕ ಎ.ಟಿ. ಮಳ್ಳಳ್ಳಿ ತಿಳಿಸಿದರು.
ಪಟ್ಟಣದ ಶ್ರೀ ಅನ್ನದಾನ ವಿಜಯ ಬಾಲಕ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ಆಚರಿಸಲಾದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಭಯ ಶಾಲೆಗಳ ಮುಖ್ಯೋಪಾಧ್ಯಾಯರಾದ ಎಸ್.ಎನ್. ಹೂಲಗೇರಿ, ಎಂ.ಬಿ. ಸಜ್ಜನರ ಹಾಗೂ ಶಿಕ್ಷಕ ವೃಂದದವರಾದ ಎಂ.ಎಸ್. ಅತ್ತಾರ, ಎಂ.ವಿ. ಬಿಂಗಿ, ಎಲ್.ಎನ್. ನಾಯಕ, ಎಸ್. ಶಿವಮೂರ್ತಿ, ಕೆ.ಸಿ. ಜೋಗಿ, ಎಸ್.ಬಿ. ಬೂದಿಹಾಳ, ಟಿ.ಬಿ ಆಡೂರ, ಆರ್.ಎಂ. ಸಿಳ್ಳಿನ, ಶಿಕ್ಷಕಿಯರಾದ ಎ.ಎಂ. ರಾಠೋಡ, ಆಯ್.ಜ್ಞಾನೇಶ್ವರಿ, ಆರ್.ಎಂ. ಗುಳಬಾಳ, ಎಸ್.ಎಫ್. ಧರ್ಮಾಯತ, ನವ್ಯ ಕೋಡಿಕೊಪ್ಪಮಠ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.