ಹಳಕಟ್ಟಿ, ಲಿಂಗಾನಂದರು ಎರಡು ನಕ್ಷತ್ರಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:  ಕಲ್ಯಾಣಕ್ರಾಂತಿಯಲ್ಲಿ ಶರಣರ ಕಗ್ಗೊಲೆ, ವಚನ ಸಾಹಿತ್ಯ ದಹಿಸುವಿಕೆ, ಎಳೆಹೂಟೆಯಂಥಹ ನಿರ್ದಯ ಕ್ರಮಗಳಿಂದ ಕಂಗೆಟ್ಟ ಶರಣರು ಚೆನ್ನಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯತ ಧರ್ಮಗ್ರಂಥ ರಕ್ಷಣೆಗಾಗಿ ವಚನ ಕಟ್ಟುಗಳನ್ನು ಹೊತ್ತುಕೊಂಡು ಉಳವಿಯತ್ತ ನಡೆದರು. ಕಲ್ಯಾಣದ ಘಟನೆ ಲಿಂಗಾಯತ ಧರ್ಮಕ್ಕೆ ದೊಡ್ಡ ಹಿನ್ನಡೆ ನೀಡಿತು. ಮುಂದೆ 15ನೇ ಶತಮಾನದಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ಹಾಗೂ ಅವರ ಶಿಷ್ಯಂದಿರು ವಚನ ಸಾಹಿತ್ಯದ ಪುನಶ್ಚೇತನ ನಡೆಯಿತು. ಮುಂದಿನ 4 ಶತಮಾನಗಳ ನಂತರ ಫ.ಗು. ಹಳಕಟ್ಟಿ ಎಂಬ ಮಹಿಮರ ಮೂಲಕ ವಚನ ತಾಡೋಲೆಗಳ ರಕ್ಷಣೆ, ಅವುಗಳ ಪ್ರಕಟನೆ ನಡೆದು ವಚನ ಸಾಹಿತ್ಯ ರಕ್ಷಣೆಯಾಗುವಂತಾಯಿತೆಂದು ಶಿಕ್ಷಕರಾದ ಎಸ್.ಎಚ್. ಹಿರೇಸಕ್ಕರಗೌಡ್ರ ನುಡಿದರು.

Advertisement

ಅವರು ಬಸವದಳದ 1652ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ವಚನ ಸಂಶೋಧನೆಯ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ 61ನೇ ಸ್ಮರಣೆ ಹಾಗೂ ಪೂ. ಲಿಂಗಾನಂದ ಸ್ವಾಮಿಗಳ 30ನೇ ಸ್ಮರಣೆ ಕಾರ್ಯಕ್ರಮದಲ್ಲಿ ಫ.ಗು. ಹಳಕಟ್ಟಿಯವರ ಜೀವನ ಚರಿತ್ರೆ ಕುರಿತು ಮಾತನಾಡಿದರು.

ಫಕೀರಪ್ಪನವರ ತಂದೆ ಗುರುಬಸಪ್ಪನವರು ಶಿಕ್ಷಕರಾಗಿದ್ದರು. ಜೊತೆಗೆ ಶರಣತತ್ವ ಚಿಂತಕರಾದ ಮಾವ ತಮ್ಮಣ್ಣಪ್ಪ ಚಿಕ್ಕೋಡಿಯವರ ಒಡನಾಟದ ಪರಿಣಾಮ ಶರಣ ಸಾಹಿತ್ಯದತ್ತ ಆಸಕ್ತಿ ಬೆಳೆಯಿತು. ವಿದ್ಯಾರ್ಥಿ ದೆಸೆಯಿಂದಲೂ ಪ್ರತಿಭಾವಂತರಾಗಿದ್ದ ಅವರು ಕಾನೂನು ಪದವಿ ಪಡೆದು ವಕೀಲ ವೃತ್ತಿ ಮಾಡಲಾರಂಭಿಸಿದರು. ಅದೇ ಸಂದರ್ಭದಲ್ಲಿ ಭಾಗೀರಥಿ ಜೊತೆ ವಿವಾಹವಾಯಿತು. ಶಿವಲಿಂಗಪ್ಪ ಮಂಚಾಲೆ ಇವರ ಮನೆಯಲ್ಲಿದ್ದ `ಪ್ರಭುದೇವರ ವಚನಗಳ’ ತಾಳೆಗರಿಯ ವಚನ ಕಟ್ಟುಗಳನ್ನು ಕಂಡು ಪ್ರಭಾವಿತರಾದರು. ಒಟ್ಟಾರೆಯಾಗಿ ಫ.ಗು. ಹಳಕಟ್ಟಿ ಹಾಗೂ ಲಿಂಗಾನಂದ ಮಹಾಸ್ವಾಮಿಗಳು ಲಿಂಗಾಯತ ಧರ್ಮದ ಎರಡು ನಕ್ಷತ್ರಗಳಾಗಿವೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ನಿಶಿಕ್ಷಕಿ ವನಜಾಕ್ಷಿ ಕಪ್ಪರದ ಮಾತನಾಡಿ, ತಾವು ಕೂಡಾ ಲಿಂಗಾನAದ ಸ್ವಾಮಿಗಳ ಪ್ರವಚನದ ಪ್ರಭಾವಕ್ಕೆ ಒಳಗಾಗಿದ್ದೇನೆ. ಅವರು ಹೇಳುತ್ತಿದ್ದ ಧರ್ಮಗುರು ಬಸವಣ್ಣ, ಧರ್ಮಗ್ರಂಥ ವಚನ ಸಾಹಿತ್ಯ, ಧರ್ಮದೇವರು ಇಷ್ಟಲಿಂಗವೆಂಬುದನ್ನು ಪೂಜ್ಯರಿಂದ ಅರಿತಿದ್ದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಸವದಳ ಅಧ್ಯಕ್ಷ ವಿ.ಕೆ. ಕರೇಗೌಡ್ರ ಮಾತನಾಡಿ, ನಮ್ಮ ಬಸವದಳ ಕಳೆದ ಮೂರು ದಶಕಗಳಿಂದಲೂ ಶರಣ ಸಾಹಿತ್ಯ ಪ್ರಸರಣ ಮಾಡುತ್ತಿದೆ. ಮನೆ, ಮನೆಗಳಿಗೂ ವಚನ ಸಾಹಿತ್ಯ ಮುಟ್ಟಿಸಲು ಕಟಿಬದ್ಧರಾಗಿದ್ದೇವೆಂದರು.

ಆರಂಭದಲ್ಲಿ ವಚನ ಪ್ರಾರ್ಥನೆಯು ರೇಣಕ್ಕ ಕರೀಗೌಡ್ರ ನಡೆಸಿದರು. ಸಹನಾ ಆಲತಗಿಯವರು ಸ್ವಾಗತಿಸಿದರು. ಕಳ್ಳಿಮನಿ ರಾಮಣ್ಣ ನಿರೂಪಿಸಿದರು. ಪ್ರಕಾಶ ಅಸುಂಡಿ ಶರಣು ಸಮರ್ಪಣೆಗೈದರು.

ನಿವೃತ್ತ ಶಿಕ್ಷಕಿ ಗಂಗಮ್ಮಾ ಹೂಗಾರ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಬಗ್ಗೆ ಮಾತನಾಡುತ್ತಾ, ಹಳಕಟ್ಟಿಯವರು ವಚನ ತಾಡೋಲೆಗಳನ್ನು ಸಂಗ್ರಹಿಸಿ ಗ್ರಂಥಗಳ ಮೂಲಕ ಪ್ರಕಟಿಸಿದರು. ಆ ವಚನ ಸಾಹಿತ್ಯವನ್ನು ನಾಡಿನಾದ್ಯಂತ ತಮ್ಮ ಪ್ರವಚನಗಳ ಮೂಲಕ ಪ್ರಸಾರ ಮಾಡಿದ ಕೀರ್ತಿ ಪೂ. ಲಿಂಗಾನಂದ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಅಲ್ಲದೇ ಶರಣ ಧರ್ಮ ಅರಿವಂತಾಗಲು ನಾಡಿನಾದ್ಯಂತ ರಾಷ್ಟ್ರೀಯ ಬಸವದಳಗಳನ್ನು ಸ್ಥಾಪಿಸಿ ಅಲ್ಲಿ ಶರಣರ ವಿಚಾರ ಚರ್ಚೆ, ಚಿಂತನೆ ನಡೆಸಲು ಅನುವು ಮಾಡಿಕೊಟ್ಟರು. ಇದು ದೊಡ್ಡ ಪರಿಣಾಮ ಬೀರಿ ಜನರಿಗೆ ನಿಜವಾದ ಲಿಂಗಾಯತ ಧರ್ಮದ ಸ್ವರೂಪದ ಪರಿಚಯವಾಯಿತು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here