ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಿಲ್ಲಾ ಶ್ರೀ ಜೋಡ ಹನುಮಂತ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಎಪ್ರಿಲ್ 12ರಂದು ಬೆಳಿಗ್ಗೆ ಸಂತ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, ಮಾರುತಿ ದೇವರಿಗೆ ಅಭಿಷೇಕ, ವಿಶೇಷ ಆಭರಣ-ಅಲಂಕಾರ ಸೇವೆ, ಬೆಳಿಗ್ಗೆ ಸೂರ್ಯೋದಯಕ್ಕೆ ಮಾರುತಿ ತೊಟ್ಟಿಲೋತ್ಸವ ಕಾರ್ಯಕ್ರಮ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 12 ಗಂಟೆಗೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಓಣಿಯ ಗುರು-ಹಿರಿಯರು, ಟ್ರಸ್ಟ್ ಕಮಿಟಿ, ಯುವಕ ಮಂಡಳದ ನೇತೃತ್ವದಲ್ಲಿ ನೆರವೇರುವುದು.
Advertisement
ಸದ್ಭಕ್ತರು ಹನುಮನ ದರ್ಶನ ಪಡೆದು ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು-ಮನ-ಧನದೊಂದಿಗೆ ಸೇವೆ ಸಲ್ಲಿಸಲು ಯುವಕ ಮಂಡಳದವರು ವಿನಂತಿಸಿದ್ದಾರೆ.