ವಿಜಯಸಾಕ್ಷಿ ಸುದ್ದಿ, ಹಾವೇರಿ: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಗುರುಪಾದಯ್ಯ ವೀ.ಸಾಲಿಮಠ ಅವರು ನೂತನವಾಗಿ ಸ್ಥಾಪನೆಯಾದ ಹಾವೇರಿ ವಿಶ್ವವಿದ್ಯಾಲಯಕ್ಕೆ ಲಾಂಛನ ನಿರ್ಮಾಣಗೊಳಿಸಿ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜರುಗಿದ ಹಾ.ವಿ.ವಿ. ದ್ವಿತೀಯ ಸಂಸ್ಥಾಪನಾ ದಿನದಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಲಪತಿಗಳಾದ ಡಾ. ಎಸ್.ಎಚ್. ಜಂಗಮಶೆಟ್ಟಿ, ಬ್ಯಾಡಗಿ ಕ್ಷೇತ್ರದ ಶಾಸಕರಾದ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಡಿ., ಕೊಡಗು ವಿವಿ ಕುಲಪತಿಗಳಾದ ಪ್ರೊ. ಅಶೋಕ ಆಲೂರ, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಅಶೋಕ ದಳವಾಯಿ, ನಾವೀನ್ಯತೆ ಸಲಹೆಗಾರರಾದ ರಾಜಶೇಖರ ಎಸ್.ಹಿರೇಮಠ, ಅಂತಾರಾಷ್ಟ್ರೀಯ ಶೈಕ್ಷಣಿಕ ಸಲಹೆಗಾರರಾದ ಡಾ. ಶಿವಾನಂದ ಉತ್ಲಾಸರ, ಕುಲಸಚಿವರಾದ ಪ್ರೊ. ಎಸ್.ಟಿ. ಬಾಗಲಕೋಟಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ರೇಣುಕಾ ಮೇಟಿ, ಸಿಂಡಿಕೇಟ್ ಸದಸ್ಯರು ಪಾಲ್ಗೊಂಡಿದ್ದರು.