ಬೆಂಗಳೂರು: ನಿನ್ನ ಸಹೋದರನ ಆಸ್ತಿ ಲೆಕ್ಕ ಕೊಡು. ನಿನ್ನ ಅಧಿಕಾರ ಹೇಗೆ ದುರುಪಯೋಗ ಆಯ್ತು? ಅದೆಲ್ಲ ಮೊದಲು ಲೆಕ್ಕ ಕೊಡು ಎಂದು ಏಕವಚನದಲ್ಲಿ ಡಿಕೆ ಶಿವಕುಮಾರ್ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದರು. ನಗರದಲ್ಲಿ ಮಾತನಾಡಿದ ಅವರು, ನಿನ್ನ ಪ್ರಶ್ನೆಗೆ ಉತ್ತರ ಕೊಡೊಣ. ಮೊದಲು ಈ ಹಿಂದೆ ನೀವು ಮಾಡಿರುವ ಹಗರಣಗಳಿಗೆ ಉತ್ತರ ಕೊಡಿ ಅಂತ ಕೇಳುತ್ತಿದ್ದೇವೆ.
ನಿನ್ನ ಸಹೋದರನ ಆಸ್ತಿ ಲೆಕ್ಕ ಕೊಡು. ನಿನ್ನ ಅಧಿಕಾರ ಹೇಗೆ ದುರುಪಯೋಗ ಆಯ್ತು? ಅದೆಲ್ಲ ಮೊದಲು ಲೆಕ್ಕ ಕೊಡು ಎಂದರು. ಇನ್ನೂ ಕೇಂದ್ರ ಸರ್ಕಾರದಿಂದ ಏಕೆ ಹಣ ಬಿಡುಗಡೆ ಮಾಡಿಸಲಿಲ್ಲ. ಹಿಂದೆ ನೀವು ಏನೇನು ಮಾಡಿದ್ರಿ ಎಂದು ಜನರಿಗೆ ತಿಳಿಸಲು ಈ ಜನಾಂದೋಲನ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಿಂದ ಇಬ್ಬರು ನಾಯಕರ ನಡುವೆ ಮಾತಿನ ಗುದ್ದಾಟ ನಡೆಯುತ್ತಲೇ ಇದೆ. ಡಿಕೆ ಶಿವಕುಮಾರ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಸಿಡಿ ಶಿವು ಎಂದು ವ್ಯಂಗ್ಯವಾಡಿದ್ದರು. ನಂತರ ಇಬ್ಬರ ವಾಕ್ಸಮರ ಆಸ್ತಿ ವಿಚಾರಕ್ಕೆ ತಿರುಗಿದೆ. ಪರಸ್ಪರು ಆಸ್ತಿ ಲೆಕ್ಕ ಕೊಡಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.