HDK ಸರ್ಕಾರ ಬೀಳಿಸುವ ಜೊತೆಗೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲಿ: ಕೃಷ್ಣಭೈರೇಗೌಡ

0
Spread the love

ಮಂಡ್ಯ: ಕುಮಾರಸ್ವಾಮಿ ಸರ್ಕಾರ ಬೀಳಿಸುವ ಜೊತೆಗೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲಿ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗುವವರು ಕರ್ನಾಟಕಕ್ಕೆ ಮೊದಲು ನ್ಯಾಯ ಕೊಡಲಿ, ಮಾನ್ಯ ಕುಮಾರಸ್ವಾಮಿ ಸರ್ಕಾರ ಬೀಳಿಸುವ ಜೊತೆಗೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲಿ ಎಂದರು.

Advertisement

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಮೇಕೆದಾಟಿಗೆ ಒಂದೆ ದಿನದಲ್ಲಿ ಸಹಿ ಹಾಕಿಸುತ್ತೇನೆ ಎಂದಿದ್ರು‌. ಸರ್ಕಾರ ಬಂದು 6 ತಿಂಗಳು ಕಳೆಯುತ್ತಿದೆ ಯಾಕೆ ಇನ್ನೂ ಮೇಕೆದಾಟುಗೆ ಅನುಮತಿ ಕೊಟ್ಟಿಲ್ಲ‌‌, ಅಪ್ಪರ್  ಭದ್ರ ಯೋಜನೆಗೆ 5300 ಕೋಟಿ ಕೊಡಬೇಕು. ಆದ್ರೆ 53 ಪೈಸೆಯನ್ನ ಕೊಟ್ಟಿಲ್ಲ. ಸರ್ಕಾರ ಬೀಳಿಸಿದ್ರೆ ಅಧಿಕಾರ ಸಿಗಬಹುದು‌. ಆದ್ರೆ ಮೇಕೆದಾಟುಗೆ ಸಹಿ ಹಾಕಿಸಿಕೊಡಿ ಜನ ನಿಮಗೆ ಒಳ್ಳೆಯದು ಮಾಡ್ತಾರೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.


Spread the love

LEAVE A REPLY

Please enter your comment!
Please enter your name here