ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯೋಗ ರೋಗಿಗಳಿಗೆ ಸಂಪೂರ್ಣತಾ ಚಿಕಿತ್ಸಾ ಪದ್ಧತಿಯಾದರೆ ಯೋಗಿಗಳಿಗೆ ಸಾಧನೆಯ ಮಾರ್ಗವಾಗಿದೆ. ನಿತ್ಯದಲ್ಲಿ ಯೋಗ ಅಳವಡಿಸಿಕೊಂಡರೆ ಆರೋಗ್ಯಕರ ಜೀವನ ಸಾಧ್ಯವಾಗುತ್ತದೆ ಎಂದು ಬಿಸಿಎನ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಲೊಹಿತ ನೆಲವಿಗಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಲಕ್ಷ್ಮೇಶ್ವರದ ವಿಶ್ವ ಆರೋಗ್ಯ ಲೋಕ, ಈಶ್ವರೀಯ ವಿಶ್ವವಿದ್ಯಾಲಯ, ವೈದ್ಯರ ಸಂಘ ಹಾಗೂ ಹಿರಿಯ ನಾಗರಿಕರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯೋಗ ದಿನಾಚರಣೆ, ಯಜ್ಞಮಾತಾ ಸ್ಮೃತಿದಿನ ಹಾಗೂ ಸದ್ಭಾವನಾ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ ನಾಗಲಾಂಬಿಕಾ ಸಾನ್ನಿಧ್ಯ ವಹಿಸಿ ಮಾತನಾಡಿ, ಯೋಗ ಮತ್ತು ಧ್ಯಾನ ಒಂದೇ ನಾಣ್ಯದ ಎರಡು ಮುಖಗಳು. ಆರೋಗ್ಯವಂತ ಸಮಾಜಕ್ಕಾಗಿ ಯೋಗ ಮತ್ತು ಧ್ಯಾನ ಪ್ರಮುಖವಾಗಿದ್ದರಿಂದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪ್ರತಿದಿನ ಉಚಿತವಾಗಿ ಯೋಗ, ಧ್ಯಾನದ ಮಾಹಿತಿ ತಿಳಿಸಿಕೊಡಲಾಗುತ್ತಿದೆ ಎಂದರು.
ಪುರಸಭೆ ಅದ್ಯಕ್ಷೆ ಯಲ್ಲಮ್ಮ ದುರಗಣ್ಣವರ ಪ್ರಮಾಣಪತ್ರ ವಿತರಿಸಿದರು. ಅತಿಥಿಗಳಾಗಿ ವೈದ್ಯರ ಸಂಘದ ಅಧ್ಯಕ್ಷ ಡಾ. ಪಿ.ಡಿ. ತೋಟದ, ಜಿಲ್ಲಾ ಯುವ ಪ್ರಭಾರಿ ಯುವ ಭಾರತ ಪ್ರಕಾಶ ಮದ್ದಿನ, ಮಾಲಾದೇವಿ ದಂದರಗಿ, ಸಿ.ಆರ್. ಲಕ್ಕುಂಡಿಮಠ ಮುಂತಾದವರು ಪಾಲ್ಗೊಂಡಿದ್ದರು.
ವಿಶ್ವ ಆರೋಗ್ಯ ಲೋಕದ ಅಧ್ಯಕ್ಷ ಬಸವರಾಜ ಸಂಗಪ್ಪಶೆಟ್ಟರ, ಯೋಗ ಶಿಕ್ಷಕರಾದ ವೀಣಾ ಹತ್ತಿಕಾಳ, ಪುಷ್ಪಾ ಪೆರಡೂರ, ರೂಪಾ ಸಂತಿ, ಅಂಬಿಕಾ ಶಿದ್ಲಿಂಗ, ಪಾರ್ವತಿ ಕಳ್ಳಿಮಠ, ಗೌರಿ ಸಂಗಪ್ಪಶೆಟ್ಟರ, ನಾಗರಾಜ ಸೂರಣಗಿ, ಪ್ರಕಾಶ ಹುಲಬಜಾರ, ನೀಲಪ್ಪ ತೆಗ್ಗಿನಳ್ಳಿ, ದಶರಥ ಕೋಟೆಗೌಡ್ರ, ಚಂದ್ರಶೇಖರ ಪಾಟೀಲ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ 60 ಜನ ಯೋಗ ಸಾಧಕರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಪರಮೇಶ್ವರಿ ಪುರಾಣಿಕಮಠ ಪ್ರಾರ್ಥಿಸಿದರು. ಶೈಲಾ ಆದಿ ಸ್ವಾಗತಿಸಿದರು. ಎಸ್.ಎ. ಬಣಗಾರ ವಂದಿಸಿದರು. ರಾಷ್ಟ್ರೀಯ ಯೋಗ ಪಟು ನಮೀತಾ ಗುರಮ್ಮನವರ, ಅಮರನಾಥ ಸೂರಣಗಿ, ಸಮರ್ಥ ಶಿದ್ಲಿಂಗ, ಯೋಗ ಸಾಧಕ ಸಮಿತಿಯ ಸದಸ್ಯರು ಯೋಗ ಪ್ರದರ್ಶನ ನೀಡಿದರು.