ಹೃದಯಾಘಾತ: ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್‌ಟೇಬಲ್ ಬಸವರಾಜ್ ಸಾವು!

1
Spread the love

ಗದಗ:- ಕರ್ತವ್ಯದಲ್ಲಿರುವಾಗಲೇ ಮುಖ್ಯ ಪೇದೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಧಾರವಾಡದ ಕೋರ್ಟ್ ಬಳಿ ಜರುಗಿದೆ.

Advertisement

ಗದಗ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ವಾಹನ ಚಾಲಕ, ಮುಖ್ಯ ಪೇದೆ ಬಸವರಾಜ ವಿಠ್ಠಲಾಪುರ ಸಾವನ್ನಪ್ಪಿದ ಸಿಬ್ಬಂದಿ ಎನ್ನಲಾಗಿದೆ.

ಗದಗನಿಂದ ಧಾರವಾಡಕ್ಕೆ ಕೈದಿ ವರ್ಗಾವಣೆ ಮಾಡುವಾಗ ಘಟನೆ ಜರುಗಿದೆ. ವಾಹನ ಚಾಲನೆ ಮಾಡುವಾಗಲೇ ಎದೆನೋವು ಕಾಣಿಸಿಕೊಂಡಿದೆ.

ತಕ್ಷಣ ರಸ್ತೆ ಪಕ್ಕಕ್ಕೆ ಚಾಲಕ ಬಸವರಾಜ್ ವಾಹನ ನಿಲ್ಲಿಸಿದರು. ಕ್ಷಣಮಾತ್ರದಲ್ಲೇ‌ ಹೃದಯಾಘಾತವಾಗಿ‌ ಬಸವರಾಜ್ ಸಾವನ್ನಪ್ಪಿದ್ದಾರೆ.

2002ರ ಬ್ಯಾಚ್‌ನ ಬಸವರಾಜ್ ವಿಠ್ಠಲಾಪೂರ ಮೂಲತಃ ಹಾವೇರಿ ಜಿಲ್ಲೆಯ ಬಂಕಾಪೂರ ಗ್ರಾಮದವರು. ಬಸವರಾಜ್ ಅವರ ಅಕಾಲಿಕ‌ ನಿಧನಕ್ಕೆ‌ ಗದಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.


Spread the love

1 COMMENT

  1. ಮೃತರ ಅಕಾಲಿಕ ಮರಣ ಶೋಕ ಕುಟುಂಬ ಸಹಿಸಿ ಕೊಳ್ಳುವ ಶಕ್ತಿ ನೀಡಲಿ,ಮೃತನ ಆತ್ಮಕ್ಕೆ ಚಿರಶಾಂತಿ ನೀಡಿ
    ಲೆಂದು ಭಗವಂತನಲ್ಲಿ ಪ್ರಾರ್ಥನೆ 💐🙏

LEAVE A REPLY

Please enter your comment!
Please enter your name here