ವಿಜಯಪುರ:- ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಕರ್ನಾಟಕದ ಜೀವನದಿ ಕೃಷ್ಣೆ ತುಂಬಿ ಹರಿಯುತ್ತಿದ್ದು, ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
Advertisement
ಒಟ್ಟು 123 ಟಿಎಂಸಿ ಸಂಗ್ರಹಣ ಸಾಮಥ್ರ್ಯ ಹೊಂದಿದೆ. 123 ಟಿಎಂಸಿ ನೀರು ಸಂಗ್ರಹವಾಗಿದ್ದು, 30,000 ಕ್ಯೂಸೆಕ್ ಒಳಹರಿವು ಹಾಗೂ 30,000 ಕ್ಯೂಸೆಕ್ ಹೊರಹರಿವು ದಾಖಲಾಗಿದೆ. ಇದರಿಂದ ಜಿಲ್ಲೆಯ ರೈತರಲ್ಲಿ ಸಂಭ್ರಮ ಮನೆಮಾಡಿದೆ.
ಡ್ಯಾಂನ ಇಂದಿನ ನೀರಿನ ಮಟ್ಟ:
ಗರಿಷ್ಠ ಎತ್ತರ – 519.60 ಮೀಟರ್
ನೀರು ಸಂಗ್ರಹ ಸಾಮಥ್ರ್ಯ – 123.081 ಟಿಎಂಸಿ.
ಪ್ರಸ್ತುತ ನೀರು ಸಂಗ್ರಹ – 123 ಟಿಎಂಸಿ.
ಒಳಹರಿವು – 30,000 ಕ್ಯೂಸೆಕ್.
ಹೊರ ಹರಿವು – 30,000 ಕ್ಯೂಸೆಕ್.