ರಾಜಿ ಸಂಧಾನಕ್ಕೆ ಬಂದಿದ್ದ ಪತ್ನಿಯನ್ನು ಪೊಲೀಸ್ ಠಾಣೆ ಬಳಿಯೇ ಕೊಲೆಗೈದ ಪತಿ!

0
Spread the love

ಚಿಕ್ಕಬಳ್ಳಾಪುರ:- ಪತ್ನಿಯನ್ನು ಪೊಲೀಸ್ ಠಾಣೆಯ ಸಮೀಪವೇ ಪತಿ ಕೊಲೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ ಜರುಗಿದೆ. ವಿದ್ಯಾ ಮೃತ ದುರ್ದೈವಿ. ಈತ ಕರನಂಜಿಪುರದ ನಿವಾಸಿ ಎನ್ನಲಾಗಿದೆ.

Advertisement

8 ವರ್ಷಗಳ ಹಿಂದೆ ಗಿರೀಶ್ ಮತ್ತು ವಿದ್ಯಾ ವಿವಾಹವಾಗಿತ್ತು. ಆದರೆ, ವಿದ್ಯಾರಿಗೆ ದೊಡ್ಡಮೂಡಹಳ್ಳಿ ನಿವಾಸಿ ಶ್ರೀನಾಥ್ ಜೊತೆ ಅಕ್ರಮ ಸಂಬಂಧವಿತ್ತು. ಮೂರು ತಿಂಗಳ ಹಿಂದೆ ಶ್ರೀನಾಥ್ ಜೊತೆ ವಿದ್ಯಾ ಓಡಿ ಹೋಗಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಫ್​ಐಆರ್ ದಾಖಲಾದ ನಾಲ್ಕೇ ದಿನಕ್ಕೆ ಕೊಯಮತ್ತೂರಿನಲ್ಲಿದ್ದ ವಿದ್ಯಾ ಹಾಗೂ ಪ್ರಿಯಕರ ಶ್ರೀನಾಥ್​ರನ್ನು ಪೊಲೀಸರು ಠಾಣೆಗೆ ಕರೆ ತಂದು ಬುದ್ದಿವಾದ ಹೇಳಿದ್ದರು. ಆಗ, ವಿದ್ಯಾ ತನ್ನ ಪತಿ ಜೊತೆ ಹೋಗಲು ನಿರಾಕರಿಸಿದ್ದರು. ಹೀಗಾಗಿ, ವಿದ್ಯಾರನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಮಂಗಳವಾರ ಗಿರೀಶ್​ ಮತ್ತು ವಿದ್ಯಾರನ್ನು ಠಾಣೆಗೆ ಕರೆಸಿಕೊಂಡು ಬುದ್ದಿವಾದ ಸಹ ಹೇಳಲಾಗಿತ್ತು. ಆದರೆ, ಠಾಣೆಯಿಂದ ಆಚೆ ಬರುತ್ತಿದ್ದಂತೆ ಪತಿ ಗಿರೀಶ್​ ಪತ್ನಿ ವಿದ್ಯಾರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.


Spread the love

LEAVE A REPLY

Please enter your comment!
Please enter your name here