ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತೀಯರಾದ ನಾವೆಲ್ಲ ಒಂದೇ ಎಂಬ ಮನೋಭಾವನೆ ಪ್ರತಿಯೊಬ್ಬರ ಅಂತರಾಳದ ಮಾತಾಗಬೇಕು. ಅಂದಾಗ ಮಾತ್ರ ಸುಭದ್ರ-ಸಂಘಟಿತ ಭಾರತ ಕಟ್ಟಲು ಸಾಧ್ಯ. ಅಂತಹ ಅಂತರಾಳವು ಹಿಂದೂ ಸಮ್ಮೇಳನಗಳ ಸಂಘಟನೆಯಿಂದ ಆಗಲಿದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಹಿರೇಮಠದ ಸಭಾಭವನದಲ್ಲಿ ನರೇಗಲ್ಲ ಹೋಬಳಿ ಮಟ್ಟದ ಹಿಂದೂ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘ ಸ್ಥಾಪನೆಗೊಂಡು ಕಳೆದ 2025ರ ವಿಜಯದಶಮಿಗೆ ನೂರು ವರ್ಷಗಳು ಗತಿಸಿದ್ದು, ಅದರ ದ್ಯೋತಕವಾಗಿ ಒಂದು ವರ್ಷಗಳ ಪರ್ಯಂತ ಸಾರ್ವಜನಿಕರ ಸಹಯೋಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಈ ನಾಡಿನ ಉದ್ದಗಲಕ್ಕೂ ಹಿಂದೂ ಜಾಗೃತಿ ಮಾಡುತ್ತ ರಾಷ್ಟçಪ್ರೇಮ ಮೂಡಿಸುತ್ತಿರುವುದು ದೇಶದ ಏಕತೆಯನ್ನು ಸಾರುತ್ತಿದೆ ಎಂದರು.
ಭಾರತ ಸನಾತನ ಹಿಂದೂ ಧರ್ಮವನ್ನು ಹೊಂದಿದ್ದು, ಇಲ್ಲಿನ ಕಲೆ-ಸಾಹಿತ್ಯ-ಸಂಸ್ಕೃತಿ, ಆಚಾರ-ವಿಚಾರಗಳು ವೈಶಿಷ್ಠö್ಯತೆಯಿಂದ ಕೂಡಿವೆ. ರಾಷ್ಟçದ ಏಕತೆಗಾಗಿ ಇಂತಹ ಸಮ್ಮೇಳನಗಳು ಮೇಲಿಂದ ಮೇಲೆ ನಡೆಯುವದರಿಂದ ಯುವ ಪೀಳಿಗೆಗೆ ಹಿಂದೂ ಸಂಸ್ಕೃತಿಯನ್ನು ಪರಿಚಯಿಸಿದಂತಾಗುತ್ತದೆ. ಜ. 24ರಂದು ನರೇಗಲ್ಲ ಹೋಬಳಿ ಮಟ್ಟದ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸೋಣ ಇದಕ್ಕೆ ನಮ್ಮ ಸಲಹೆ, ಸಹಕಾರ ಸದಾ ಇದ್ದೇ ಇರುತ್ತದೆ ಎಂದರು.
ಸಮ್ಮೇಳನದ ಅಧ್ಯಕ್ಷ ಬಸವರಾಜ ವಂಕಲಕುಂಟಿ ಮಾತನಾಡಿ, ಸಮ್ಮೇಳನದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ನರೇಗಲ್ಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಗೆ ಸಂಚರಿಸಿ ಜನರಲ್ಲಿ ಸಮ್ಮೇಳನದ ರೂಪುರೇಷೆಗಳನ್ನು ತಿಳಿಸಲಾಗಿದೆ. ಇನ್ನು ತಮ್ಮ ಮಾರ್ಗದರ್ಶನದೊಂದಿಗೆ ಸಮ್ಮೇಳನದ ಯಶಸ್ಸಿಗೆ ಶ್ರಮವಹಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಆನಂದ ಕುಲಕರ್ಣಿ, ಜಗದೀಶ ಸಂಕನಗೌಡ್ರ, ಡಾ. ಆರ್.ಕೆ. ಗಚ್ಚಿಮಠ, ಉಮೇಶ ಪಾಟೀಲ, ರಘುನಾಥ ಕೊಂಡಿ, ಮಂಜುನಾಥ ಹೆಗಡೆ, ಎಸ್.ಕೆ. ಪಾಟೀಲ, ಮಲ್ಲನಗೌಡ ಪಾಟೀಲ, ಶಿವಕುಮಾರ ಮಾವಿನಕಾಯಿ, ಚನ್ನಬಸಪ್ಪ ಕುಷ್ಟಗಿ, ರವಿ ಮ್ಯಾಗೇರಿ, ಮಹೇಶ ಜೋಳದ, ಸುರೇಖಾ ರಾಯಬಾಗಿ, ಸೀಮಾ ಕೊಂಡಿ, ನಿರ್ಮಲಾ ಹಿರೇಮಠ ಹಾಗೂ ಅರ್ಚನಾ ಕುಲಕರ್ಣಿ ಉಪಸ್ಥಿತರಿದ್ದರು.



