HomeGadag Newsಹೋಮ ಹವನಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ

ಹೋಮ ಹವನಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಧಾರ್ಮಿಕ ಕಾರ್ಯಗಳಲ್ಲಿ ನೆರವೇರಿಸುವ ಹೋಮ-ಹವನಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಹೋಮ-ಹವನಗಳನ್ನು ನೆರವೇರಿಸಿದರೆ ಮುಂಬರುವ ಅನೇಕ ನಷ್ಟಗಳನ್ನು ತಪ್ಪಿಸಬಹುದು ಎಂದು ಅರುಣ ಜಿ. ಕುಲಕರ್ಣಿ (ಕುರಗಡ್ಡಿ) ಹೇಳಿದರು.

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದಿರುವ 116ನೇ ವರ್ಷದ ಶ್ರೀ ಗುರುಪ್ರತಿಪದೆ ಉತ್ಸವದ ಅಂಗವಾಗಿ ಸೋಮವಾರ ಜರುಗಿದ ಲಘುರುದ್ರ ಸ್ವಾಹಾಕಾರ ಹೋಮದ ಪೂರ್ಣಾಹುತಿ ನಂತರ ಅವರು ಮಾತನಾಡಿದರು.

ನರೇಗಲ್ಲದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಶ್ರೀ ಗುರುಪ್ರತಿಪದೆ ಉತ್ಸವವು ಯಾವುದೇ ವಿಘ್ನವಿಲ್ಲದೆ 116 ವರ್ಷಗಳವರೆಗೆ ಸಾಗಿ ಬಂದಿರುವುದು ಶ್ರೀ ಗುರು ದತ್ತಾತ್ರೇಯನ ಆಶೀರ್ವಾದವೇ ಕಾರಣ. ಲಘುರುದ್ರ ಸ್ವಾಹಾಕಾರ ಹೋಮವು ವಿಶೇಷವಾಗಿ ರುದ್ರ ದೇವರಿಗೆ ಪ್ರೀತಿಯ ಹೋಮವಾಗಿದೆ. ಇದರಿಂದ ಕಾಲಕಾಲಕ್ಕೆ ಮಳೆ-ಬೆಳೆಗಳು ಆಗಿ ದೇಶವು ಸುಭಿಕ್ಷವಾಗುತ್ತದೆ. ಅಷ್ಟೇ ಅಲ್ಲದೆ ಜನರೂ ಕೂಡ ಶಾಂತಿ, ನೆಮ್ಮದಿಯಿಂದ ಇರಲು ಸಹಕಾರಿಯಾಗಿದೆ ಎಂದರು.

ಡಾ. ಕೃಷ್ಣಾ ಕಾಳೆ ದಂಪತಿಗಳು ಲಘುರುದ್ರ ಸ್ವಾಹಾಕಾರದ ಭಕ್ತಿಸೇವೆಯನ್ನು ವಹಿಸಿದ್ದರು. ವಿ.ಆರ್. ಗ್ರಾಮಪುರೋಹಿತ ಹೋಮದ ನೇತೃತ್ವ ವಹಿಸಿದ್ದರು. ಅರ್ಚಕ ಶ್ರೀವಲ್ಲಭಭಟ್ಟ ಸದರಜೋಶಿ, ಉಪಾಧ್ಯಕ್ಷ ಆದರ್ಶ ಕುಲಕರ್ಣಿ, ಕಾರ್ಯದರ್ಶಿ ರಘುನಾಥ ಕೊಂಡಿ, ಎಸ್.ಎಚ್. ಕುಲಕರ್ಣಿ, ಅರುಣ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ನಾಗೇಶಭಟ್ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ನಾಗರಾಜ ನಾಡಗೇರ, ಸೋಮನಾಥ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಶ್ರೀಧರ ಗ್ರಾಮಪುರೋಹಿತ, ಜಗದೀಶ ಜ್ಯೋಷಿ, ಅಭಿಷೇಕ ಜೋಷಿ, ರಾಮಚಂದ್ರ ಕುಲಕರ್ಣಿ, ಹರೀಶ ಕುಲಕರ್ಣಿ, ಸುಮಂತ ಕುಲಕರ್ಣಿ, ರಾಮಕೃಷ್ಣ ಸದರಜೋಶಿ, ಪವನ ಗ್ರಾಮಪುರೋಹಿತ, ಅನುಪ ಕುಲಕರ್ಣಿ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!