ಹಾಸನ:- ಜಿಲ್ಲೆಯ ಸಕಲೇಶಪುರದ ದೇವರುಂದ ಗ್ರಾಮದಲ್ಲಿ ಹೋಮ್ ಸ್ಟೇಗೆ ಕಾಡುಕೋಣವೊಂದು ನುಗ್ಗಿ ಆತಂಕ ಮೂಡಿಸಿದ ಘಟನೆ ಜರುಗಿದೆ.
Advertisement
ಈ ಕಾಡುಕೋಣಗೆ ದೃಷ್ಟಿ ಇಲ್ಲ. ಹೀಗಾಗಿ ಕಣ್ಣು ಕಾಣದೇ ಎಲ್ಲಂದರಲ್ಲಿ ಓಡಾಡುತ್ತಿದೆ. ಅಲ್ಲದೇ ಹೋಮ್ ಸ್ಟೇಗೆ ಸಹ ನುಗ್ಗಿ ಆತಂಕ ಮೂಡಿಸಿದೆ. ಹಲವು ದಿನಗಳಿಂದ ಕಣ್ಣು ಕಾಣದೇ ಕಾಡುಕೋಣ ಪರದಾಡುತ್ತಿದೆ.
ದೈತ್ಯಾಕಾರದ ಕಾಡುಕೋಣ ಕಂಡು ಆತಂಕಕ್ಕೆ ಒಳಗಾದ ಸ್ಥಳೀಯರು, ಅದನ್ನು ಸೆರೆ ಹಿಡಿದು ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾರೆ.