ವಿದ್ಯೆಗೆ ಬಡತನ ಅಡ್ಡಿಯಾಗದು : ಚೇತನಾ ಸೀತಾರಹಳ್ಳಿ

0
Honor the girl students who have scored high marks in SSLC examination
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಾಧನೆ ಮಾಡಲು ಮಕ್ಕಳಲ್ಲಿ ಛಲ ಮತ್ತು ಆತ್ಮಸ್ಥೆರ್ಯ ಇರಬೇಕು. ವಿದ್ಯೆ ಪಡೆಯಲು ಬಡತನ ಎಂದೂ ಅಡ್ಡಿಯಾಗಲಾರದು. ಚೆನ್ನಾಗಿ ಓದಿ, ಮಾನವೀಯ ಮೌಲ್ಯದೊಂದಿಗೆ ಭಾವೀ ಜೀವನ ರೂಪಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದರೊಂದಿಗೆ ಹೆತ್ತ ತಂದೆ-ತಾಯಿಯರಿಗೆ ಕೀರ್ತಿ ತರಬೇಕು ಎಂದು ಸೃಷ್ಟಿ ಮಹಿಳಾ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷೆ ಚೇತನಾ ಸೀತಾರಹಳ್ಳಿ ಕರೆ ನೀಡಿದರು.

Advertisement

ಸೃಷ್ಟಿ ಮಹಿಳಾ ವಿವಿಧೋದ್ದೇಶಗಳ ಸಂಘದ ಕಚೇರಿಯಲ್ಲಿ ಅವರು ಕಳೆದ ಎಪ್ರೀಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮಾತನಾಡಿದರು.

ಈ ವೇಳೆ ಭೂಮಿಕಾ ಪ್ರಶಾಂತ ಬಾಗಲಕೋಟ ಹಾಗೂ ವಿದ್ಯಾ ಬಸವರಾಜ ಚಲವಾದಿ ಇವರನ್ನು ಸನ್ಮಾನಿಸಿಲಾಗಿಯಿತು. ಸಂಘದ ಪದಾಧಿಕಾರಿಗಳಾದ ಸುಧಾ ಎಸ್.ಕಟ್ಟಿಮನಿ, ಶೋಭಾ ಸಿ.ಗಡಾದ, ರೇಣುಕಾ ಆರ್.ಗಡಾದ, ರೇಖಾ ಎಂ.ಬಾಗಲಕೋಟ, ಹನಮಕ್ಕ ವಾಯ್.ಗೋಕಾವಿ, ಅನಿತಾ ಆರ್.ಗೋಕಾಕ, ಶೋಭಾ ಗೋಕಾಕ, ಉಷಾ ಮಾನಪಟಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here