ಕರ್ನಾಟಕ ವಿಶ್ವವಿದ್ಯಾಲಯದ ನೂತನವಾಗಿ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನಗೊಂಡ ಡಿ.ಡಿ. ಮಾಳಗಿಯವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘ, ಗದಗ ಜಿಲ್ಲಾ ಶಾಖೆ ಹಾಗೂ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಫಕ್ಕೀರಪ್ಪ ಹೆಬಸೂರ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ರಾಮಕೃಷ್ಣ ರೊಳ್ಳಿ, ಮುಖಂಡರಾದ ಆರ್.ಎಮ್. ನಿಂಬನಾಯ್ಕರ, ಎಸ್.ಎಸ್. ಕರಡಿ, ಶಿವಣ್ಣ ಸಿಂಗಟಾಲಕೇರಿ, ಕೆ.ಬಿ. ಕಂಬಳಿ, ವಾಯ್.ಡಿ. ಜಡದೇಲಿ ಉಪಸ್ಥಿತರಿದ್ದರು.