ಚಿಂತಾಮಣಿಯಲ್ಲಿ ಭೀಕರ ಅಪಘಾತ: ಹೋಟೆಲ್ ಗೆ ಟಿಪ್ಪರ್ ಲಾರಿ ನುಗ್ಗಿ ಇಬ್ಬರು ದುರ್ಮರಣ!

0
Spread the love

ಚಿಕ್ಕಬಳ್ಳಾಪುರ:- ಅತಿ ವೇಗವಾಗಿ ಬರುತ್ತಿದ್ದ ಟಿಪ್ಪರ್‌ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಿಂದ ಹೋಟೆಲ್‌ಗೆ ನುಗ್ಗಿದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಕೋಲಾರ ವೃತ್ತದ ಬಳಿ ಜರುಗಿದೆ.

Advertisement

ಘಟನೆ ಪರಿಣಾಮ ಹೋಟೆಲ್‌ವೊಳಗೆ ಕ್ಯಾಶ್‌ ಕೌಂಟರ್‌ನಲ್ಲಿ ಕುಳಿತಿದ್ದ ಕ್ಯಾಶಿಯರ್‌ ಹಾಗೂ ಅಡುಗೆ ಭಟ್ಟ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 55 ವರ್ಷದ ಶಿವಣ್ಣ ಮೃತ ದುರ್ದೈವಿ ಎನ್ನಲಾಗಿದೆ. ಅಡುಗೆ ಭಟ್ಟನ ಹೆಸರು ಇನ್ನೂ ಪತ್ತೆಯಾಗಿಲ್ಲ.

ಕೋಲಾರ ವೃತ್ತದಲ್ಲಿರುವ ಶ್ರೀ ದರ್ಶಿನಿ ಫಾಸ್ಟ್ ಫುಡ್‌ ಹೋಟೆಲ್‌ಗೆ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ಲಾರಿ ಕಂಟ್ರೋಲ್ ತಪ್ಪಿ ನುಗ್ಗಿದೆ. ಮಾಡಿಕೆರೆ ಗ್ರಾಮದ ಪ್ರಕಾಶ್ ಎಂಬುವರಿಗೆ ಸೇರಿದ ಹೋಟೆಲ್ ಇದಾಗಿದೆ. ಜಲ್ಲಿ ಕಲ್ಲಿನಡಿ ಕೂಲಿಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.


Spread the love

LEAVE A REPLY

Please enter your comment!
Please enter your name here