HomeSports Newsಉದ್ಯಮಿ ವಿಜಯ್ ಮಲ್ಯ RCB ಪ್ರಾಂಚೈಸಿ ಖರೀದಿಸಿದ್ದು ಹೇಗೆ? ಅಚ್ಚರಿ ಸಂಗತಿ ರಿವೀಲ್!

ಉದ್ಯಮಿ ವಿಜಯ್ ಮಲ್ಯ RCB ಪ್ರಾಂಚೈಸಿ ಖರೀದಿಸಿದ್ದು ಹೇಗೆ? ಅಚ್ಚರಿ ಸಂಗತಿ ರಿವೀಲ್!

For Dai;y Updates Join Our whatsapp Group

Spread the love

ಐಪಿಎಲ್ ಅಂದ್ರೆ ಇಂದಿನ ಯುವ ಜನತೆಗೆ ಅಚ್ಚುಮೆಚ್ಚು. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನಿಲ್ಲದ ಹುಚ್ಚು ಅಭಿಮಾನಿಗಳು ಹೆಚ್ಚಿದ್ದಾರೆ. ಇಂತಹ ಪ್ರಾಂಚೈಸಿಯನ್ನು ಖರೀದಿಸಿದ್ದ ವಿಜಯ್ ಮಲ್ಯ ಅವರು ಕೆಲವೊಂದು ಗುಟ್ಟುಗಳನ್ನು ರಟ್ಟು ಮಾಡಿದ್ದಾರೆ.

ಎಸ್, ಬರೋಬ್ಬರಿ 18 ವರ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದು ಬೀಗಿದೆ. ಈ ಟ್ರೋಫಿ ಗೆದ್ದ ಬೆನ್ನಲ್ಲೇ ದೇಶದೆಲ್ಲೆಡೆ RCB ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಅಷ್ಟೇ ಯಾಕೆ ಮಾಜಿ ಮಾಲೀಕ ಉದ್ಯಮಿ ವಿಜಯ್ ಮಲ್ಯ ಕೂಡ RCB ತಂಡಕ್ಕೆ ಶುಭ ಕೋರಿದರು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಲ್ಯ, ಯಾರ ಸಲಹೆಯ ಮೇರೆಗೆ ಆರ್‌ಸಿಬಿಯನ್ನು ಖರೀದಿಸಿದ್ದು ಹಾಗೂ ಯಾತಕ್ಕಾಗಿ ಐಪಿಎಲ್ ಫ್ರಾಂಚೈಸಿಯನ್ನು ಖರೀದಿಸಿದ್ದು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಪಾಡ್‌ಕ್ಯಾಸ್ಟ್‌ನಲ್ಲಿ ಆರ್‌ಸಿಬಿ ಖರೀದಿಯ ಹಿಂದೆ ಇದ್ದ ಸಂಗತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಾಜಿ ಮಾಲೀಕ ವಿಜಯ್ ಮಲ್ಯ, ‘ಐಪಿಎಲ್ ಆರಂಭದಲ್ಲಿ ತಂಡಗಳನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿರುವಾಗ, ಲಲಿತ್ ಮೋದಿ ನನ್ನ ಬಳಿಗೆ ಬಂದು ತಂಡವನ್ನು ಖರೀದಿಸಲು ಕೇಳಿಕೊಂಡರು. ಲಲಿತ್ ಮೋದಿಯವರ ಮಾತುಗಳಿಂದ ಪ್ರಭಾವಿತನಾಗಿ, ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಖರೀದಿಸಲು ನಿರ್ಧರಿಸಿದೆ. ನಾನು ಆರ್‌ಸಿಬಿಯನ್ನು ಸುಮಾರು 111.6 ಮಿಲಿಯನ್ (ಸುಮಾರು ರೂ. 476 ಕೋಟಿ) ಗೆ ಖರೀದಿಸಿದೆ. ಇದು ಆ ಸಮಯದಲ್ಲಿ ಎರಡನೇ ಅತ್ಯಂತ ದುಬಾರಿ ಬಿಡ್ ಆಗಿತ್ತು.

ಮೊದಲು ನಾನು ಮುಂಬೈ ಇಂಡಿಯನ್ಸ್ ಸೇರಿದಂತೆ ಒಟ್ಟು ಮೂರು ಫ್ರಾಂಚೈಸಿಗಳಿಗೆ ಬಿಡ್ ಮಾಡಿದ್ದೆ. ಆದಾಗ್ಯೂ, ಮುಖೇಶ್ ಅಂಬಾನಿ ಅತಿ ಹೆಚ್ಚು ಬೆಲೆಗೆ ಬಿಡ್ ಮಾಡಿದ್ದರಿಂದ ಮುಂಬೈ ತಂಡವನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ನಾನು ಐಪಿಎಲ್ ಫ್ರಾಂಚೈಸಿಯನ್ನು ಖರೀದಿಸುವ ಹಿಂದಿನ ಏಕೈಕ ಉದ್ದೇಶವೆಂದರೆ ನನ್ನ ವಿಸ್ಕಿ ಬ್ರ್ಯಾಂಡ್ ‘ರಾಯಲ್ ಚಾಲೆಂಜ್’ ಅನ್ನು ಪ್ರಚಾರ ಮಾಡುವುದು ಆಗಿತ್ತು. ಅದಕ್ಕಾಗಿಯೇ ನಾನು ಫ್ರಾಂಚೈಸಿಯನ್ನು ಖರೀದಿಸಿದೆ ಹೊರತು ಕ್ರಿಕೆಟ್‌ ಮೇಲಿನ ಪ್ರೀತಿಯಿಂದಲ್ಲ ಎಂದಿದ್ದಾರೆ.

ಇದೇ ವೇಳೆ ವಿರಾಟ್ ಕೊಹ್ಲಿಯನ್ನು ಖರೀದಿಸುವ ಬಗ್ಗೆಯೂ ಮಾತನಾಡಿದ ಮಲ್ಯ, ಕೊಹ್ಲಿಯನ್ನು ಅವರ ರಾಜ್ಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸುವ ನಿರೀಕ್ಷೆಯಿತ್ತು. ಆದರೆ ದೆಹಲಿ ಫ್ರಾಂಚೈಸಿ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿತು. ಹೀಗಾಗಿ ಆರ್‌ಸಿಬಿಗೆ ವಿರಾಟ್‌ ಕೊಹ್ಲಿ ಸಿಕ್ಕರು. ನಾನು ಆರ್‌ಸಿಬಿಯನ್ನು ಶಕ್ತಿಶಾಲಿಯನ್ನಾಗಿ ಮಾಡಬಲ್ಲ ಆಟಗಾರರನ್ನು ಆಯ್ಕೆ ಮಾಡಿದ್ದೇನೆ. ಅಂಡರ್ -19 ವಿಶ್ವಕಪ್ ತಂಡದ ಯುವ ಆಟಗಾರ ವಿರಾಟ್ ಕೊಹ್ಲಿಯನ್ನು ಖರೀದಿಸುವುದು ನನಗೆ ಹೆಮ್ಮೆಯ ಕ್ಷಣವಾಗಿತ್ತು. ಈ ಆಟಗಾರ ವಿಶೇಷ ಎಂಬ ಭಾವನೆ ನನ್ನೊಳಗೆ ಇತ್ತು.

ಹಾಗಾಗಿ ನಾನು ಅವರಿಗಾಗಿ ಬಿಡ್ ಮಾಡಿದೆ. ಆಯ್ಕೆ ಪ್ರಕ್ರಿಯೆಗೆ ಸ್ವಲ್ಪ ಮೊದಲು ಅವರು ಅಂಡರ್ -19 ವಿಶ್ವಕಪ್ ಆಡುತ್ತಿದ್ದರು ಮತ್ತು ನಾನು ಅವರ ಬಗ್ಗೆ ತುಂಬಾ ಪ್ರಭಾವಿತನಾಗಿದ್ದೆ. ಹಾಗಾಗಿ, ನಾನು ಅವರನ್ನು ಆಯ್ಕೆ ಮಾಡಿದೆ. 18 ವರ್ಷಗಳ ನಂತರವೂ ಅವರು ಅದೇ ತಂಡದಲ್ಲಿದ್ದಾರೆ ಎಂಬುದು ಅದ್ಭುತವಾಗಿದೆ ಎಂದು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!