ಹೋಯ್ಸಳ ಪೊಲೀಸರನ್ನೇ ಕೂಡಿಹಾಕಿದ ಗ್ರಾಮಸ್ಥರು..! ಯಾಕೆ ಗೊತ್ತಾ..?

0
Spread the love

ಚಿಕ್ಕಬಳ್ಳಾಪುರ: ಗಂಡ ಹೆಂಡಿರ ಜಗಳ ವಿಚಾರದಲ್ಲಿ ಮದ್ಯಸ್ಥಿಕೆ ವಹಿಸಲು ಬಂದಿದ್ದ ಪೊಲೀಸರನ್ನೇ ಕೂಡಿಹಾಕಿದ ಪ್ರಸಂಗ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಅಮ್ಮಗಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಮ್ಮಗಾರಹಳ್ಳಿ ಗ್ರಾಮದಲ್ಲಿ ಶಿವಾನಂದ ಹಾಗೂ ಚಿಂತಾಮಣಿ ತಾಲ್ಲೂಕಿನ ನಾಯನಹಳ್ಳಿ ಗ್ರಾಮದ ಶಿವಾನಂದ ಪತ್ನಿ ಐಶ್ವರ್ಯ ನಡುವೆ ಕೌಟುಂಬಿಕ ಕಲಹದಿಂದ ದೂರ ಇದ್ದರಂತೆ ಇವರಿಗೆ ಒಂದು ಗಂಡು ಮಗೂ ಸಹ ಇದೆಯಂತೆ..

Advertisement

ನೆನ್ನೆ ಐಶ್ವರ್ಯ 112 ಹೋಯ್ಸಳ ಪೊಲೀಸರಿಗೆ ಕರೆ ಮಾಡಿ ತನ್ನ ಹಾಗೂ ಪತಿ ನಡುವೆ ಗಲಾಟೆಯಾಗಿದೆ ನ್ಯಾಯ ಕೊಡಿಸಿ ಅಂತ ಮನವಿ ಮಾಡಿದ್ದರಂತೆ.. ನೆನ್ನೆ ತಡರಾತ್ರಿ ಅಮ್ಮಗಾರಹಳ್ಳಿಗೆ ಬಂದ ಹೊಯ್ಸಳ ಪೊಲೀಸರು ಮಗುವನ್ನು ಕೊಡಿ ಠಾಣೆಗೆ ಬಂದು ತಂದೆ ತಾಯಿ ಇಬ್ಬರು ನ್ಯಾಯ ಪಂಚಾಯತಿ ಮಾಡಿಕೊಂಡು ಮಗುವನ್ನು ಕರೆದುಕೊಂಡೊಗಿ ಅಲ್ಲಿಯವರಿಗೆ ಸಾಂತ್ವಾನ ಕೇಂದ್ರದಲ್ಲಿ ಇರುಸುತ್ತೇವೆ ಎಂದು ಮಗುವನ್ನು ಕರೆತಂದು ಗ್ರಾಮದ ಮುಂಭಾಗದ ಮುಖ್ಯ ರಸ್ತೆಗೆ ಬಂದು ಮಗುವಿನ ತಾಯಿ ಐಶ್ವರ್ಯ ಅವರ ತಾಯಿ ಯಶೊದಮ್ಮ ಯಂಬುವರಿಗೆ ಒಪ್ಪಿಸಲು ಮುಂದಾಗಿದ್ದಾರೆ..

ಇದರಿಂದ ಮಗುವಿನ ತಂದೆಯ ಕಡೆಯವರು ಸಿಡಿದೆದ್ದು ಮಗುವನ್ನು ತಂದು ನಮಗೆ ಒಪ್ಪಿಸುವವರಿಗೂ ಹೊಯ್ಸಳ ವಾಹನವನ್ನ ಬಿಡುವುದಿಲ್ಲ ಎಂದು ಇಡೀ ಗ್ರಾಮಸ್ಥರು ಪೊಲೀಸ್ ವಾಹನ ಹಾಗೂ ಪೊಲೀಸರನ್ನ ಲಾಕ್ ಮಾಡಿದ್ದಾರೆ..


Spread the love

LEAVE A REPLY

Please enter your comment!
Please enter your name here