ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಜೀವಧ್ವನಿ ಸಂಸ್ಥೆಯ ನಿಖಿಲ್ ಹಂಜಗಿ ನೇತೃತ್ವದಲ್ಲಿ ಬೀದಿ ಪ್ರಾಣಿಗಳ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುತ್ತಿದ್ದು, ಹಸುಗಳು ಮತ್ತು ನಾಯಿಗಳಿಗೆ ಸುರಕ್ಷತೆಯನ್ನು ಒದಗಿಸಲು ಆದ್ಯತೆ ನೀಡುತ್ತಿದೆ.
ರಾತ್ರಿ ವೇಳೆ ವಾಹನಗಳ ಜೊತೆ ಘರ್ಷಣೆಗೊಳಗಾಗುವ ಅಪಾಯ ಬೀದಿ ಪ್ರಾಣಿಗಳಿಗೆ ಹೆಚ್ಚಾಗಿರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, ಜೀವಧ್ವನಿ ಸಂಸ್ಥೆ ಹಸುಗಳು ಮತ್ತು ನಾಯಿಗಳ ಕುತ್ತಿಗೆಗೆ ಪ್ರತಿಫಲಕ ಬೆಲ್ಟ್ ಗಳನ್ನು (Reflective Belts) ಅಳವಡಿಸುತ್ತಿದ್ದು, ಇದರಿಂದ, ವಾಹನ ಚಾಲಕರು ದೂರದಿಂದಲೇ ಈ ಪ್ರಾಣಿಗಳನ್ನು ಗಮನಿಸಲು ಸಾಧ್ಯವಾಗುತ್ತದೆ ಮತ್ತು ಅಪಘಾತಗಳ ಸಂಭವ ಕಡಿಮೆಗೊಳ್ಳುತ್ತದೆ.
ಜೀವಧ್ವನಿ ಕಾರ್ಯಕರ್ತರಾದ ಮಧುಮತಿ ಹೆಮಕರ್, ವಿಶ್ವನಾಥ್ ಶಿವಶೆಟ್ಟರ್, ಪರೋಕ್ಷ ಹೂಲಿ, ರಾಘವೇಂದ್ರ, ಅವಿನಾಶ್ ಬೀದಿ ಪ್ರಾಣಿಗಳಿಗೆ ಆರೋಗ್ಯ, ಆಹಾರ, ಮತ್ತು ಆಶ್ರಯವನ್ನು ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.