ಕೊಪ್ಪಳ:- ಕೊಡಲಿಯಿಂದ ಕೊಚ್ಚಿ ತನ್ನ ಧರ್ಮಪತ್ನಿಯನ್ನೇ ಗಂಡನೋರ್ವ ಕೊಲೆಗೈದು ಬಳಿಕ ಎಸ್ಕೇಪ್ ಆಗಿರುವ ಘಟನೆ ಕೊಪ್ಪಳ ಜಿಲ್ಲೆಯ ಬೂದುಗುಂಪಾ ಗ್ರಾಮದಲ್ಲಿ ಜರುಗಿದೆ. ಹೆಂಡತಿಯ ಕತ್ತು ಕೊಯ್ದು ಗಂಡ ಕೊಲೆ ಮಾಡಿದ್ದಾನೆ.
Advertisement
ಗಂಗಮ್ಮ ದೊಣ್ಣೆ ಕೊಲೆಯಾದ ದುರ್ದೈವಿ. ಶಿವಪ್ಪ ಹೆಂಡ್ತಿ ಕೊಲೆ ಮಾಡಿ ಪರಾರಿಯಾಗಿರುವ ಗಂಡ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಸ್ಥಳಕ್ಕೆ ಎಸ್ಪಿ ರಾಮ್ ಎಲ್ ಅರಸಿದ್ಧಿ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.