ಗಂಡ ಮಸಣಕ್ಕೆ, ಹೆಂಡ್ತಿ ಜೈಲಿಗೆ; ಅನಾಥವಾದ ಪುಟ್ಟ ಕಂದ, ಲವರ್ ಜತೆ ಸೇರಿ ಈ ನೀಚ ಹೆಂಗಸು ಮಾಡಿದ್ದೇನು!?

0
Spread the love

ಗದಗ:- ಪತ್ನಿಯೇ ಪತಿಯನ್ನ ಹತ್ಯೆ ಮಾಡಿ ರೋಡ್ ಆ್ಯಕ್ಸಿಡೆಂಟ್ ರೀತಿ ಬಿಂಬಿಸಲು‌ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Advertisement

ಕೇಸ್ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪತ್ನಿ ಪ್ರಿಯಕರ ಸೇರಿ ಮರ್ಡರ್ ಮಾಡಿದ ಆರೋಪ ಕೇಳಿ ಬಂದಿದೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಗದಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 30 ರಂದು ಈ ಕೊಲೆ ನಡೆದಿತ್ತು. ರೋಡ್ ಆ್ಯಕ್ಸಿಡೆಂಟ್ ರೀತಿ ಬಿಂಬಿಸಲು ಹೋಗಿ ಕಿರಾತಕರು ಸಿಕ್ಕಿಬಿದ್ದಿದ್ದಾರೆ. ಕೋಟುಮಚಗಿ ಗ್ರಾಮದ ಬಳಿಯ ಹೆದ್ದಾರಿಯಲ್ಲಿ 30 ವರ್ಷದ ಮಂಜುನಾಥ್ ಮೀಸಿ ಮೃತ ದೇಹ ಪತ್ತೆಯಾಗಿತ್ತು.

ಅನುಮಾನಗೊಂಡು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದ್ದ ವೇಳೆ ಭಯಾನಕ ಸತ್ಯ ಹೊರ ಬಿದ್ದಿದೆ. ಹತ್ಯೆಯಾದ ಮಂಜುನಾಥ್ ಮೀಸಿ ಸಹೋದರ ಸುರೇಶ್ ಮೀಸಿ ದೂರಿನನ್ವಯ ತನಿಖೆ ಕೈಗೊಳ್ಳಲಾಗಿತ್ತು. ಮಂಜುನಾಥ್ ನ ಪತ್ನಿ ಶಿವಮ್ಮ, ಪ್ರಿಯಕರ ಮಂಜುನಾಥ್ ಯಲಬುರ್ಗಾ ಸೇರಿ ಹತ್ಯೆ ಮಾಡಿರುವ ಬಗ್ಗೆ ದೂರು ನೀಡಿದರು.

ಕೊಲೆಗೀಡಾದ ಮಂಜುನಾಥ್:

ದೂರಿನ ಅನ್ವಯ ತನಿಖೆ ಕೈಗೊಂಡಾಗ ಮನೆಯಲ್ಲೇ ಕೊಲೆ ಮಾಡಿ ಹೆದ್ದಾರಿಗೆ ತಂದು ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದರು. ಇನ್ನೂ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಿದೆ. ಆರೋಪಿ ಮಂಜುನಾಥ್ ಆಗಸ್ಟ್ 29 ನೇ ತಾರೀಕು ಮಧ್ಯಾಹ್ನವೇ ಮನೆಗೆ ಬಂದಿದ್ದ. ರಾತ್ರಿ ಅಲ್ಲೇ ಇದ್ದು ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡಿದ್ದರು. ಊಟ ಆದ್ಮೇಲೆ ಮಂಜುನಾಥ್ ಮೀಸಿಯನ್ನ ಹರಿತವಾದ ವಸ್ತುವಿಂದ ಚುಚ್ಚಿ ಸಾಯಿಸಿದ್ದಾರೆ. ವಿಚಾರಣೆಯಿಂದ ಯಾವ ಆಯುಧ ಅನ್ನೋದನ್ನ ಪತ್ತೆ ಹಚ್ಚಲಾಗುತ್ತದೆ.

ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಮಂಜುನಾಥ್ ಪ್ರಾಣ ಹೋಗಿದೆ. ಯಾವುದಾದರೂ ವಾಹನ ಡಿಕ್ಕಿಯಾಗಿ ಆ್ಯಕ್ಸಿಡೆಂಟ್ ರೀತಿಯನ್ನ ಕಾಣಲಿ ಅಂತಾ ರಸ್ತೆ ಮೇಲೆ ಬಿಸಾಕಿರಬಹುದು. ಮನೆಯಲ್ಲಿ ದೇಹ ಸಾಗಿಸಿದ ರಸ್ತೆ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಸಾಕ್ಷಿ ನಾಶಕ್ಕೆ ಪ್ರಯತ್ನ ಪಟ್ಟರೂ ಕೆಲ ವೈಜ್ಞಾನಿಕ ಮಾಹಿತಿ ಸಿಕ್ಕಿವೆ.

ಕೊಲೆ ನಂತರ ಎರಡನೇ ಆರೋಪಿ ಶಿವಮ್ಮ ಮನೆಯಲ್ಲೇ ಇದ್ದಳು. ಒಂದನೇ ಆರೋಪಿ ಮಂಜುನಾಥ್ ಯಲಬುರ್ಗಾ ಎಸ್ಕೇಪ್ ಆಗಿದ್ದ, ಇದೀಗ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಬಿ.ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

ಇನ್ನೂ ನಿನ್ನೆ ಖಾಕಿ ಪಡೆ ಶ್ವಾನ ಸೀದಾ ಕೊಲೆಗಾರ್ತಿ ಅಂತ ಪತ್ತೆ ಹಚ್ಚಿತ್ತು. ಮಾಜಿ ಪ್ರೀಯತಮನ ಜೊತೆ ಸೇರಿ ಪಕ್ಕಾ ಪ್ಲಾನ್ ಮಾಡಿ ಗಂಡನ ಕೊಲೆ ಮಾಡಲಾಗಿದೆ. ಆರೋಪಿ ಮಂಜುನಾಥ್ ಯಲಬುರ್ಗಾ, ಪತ್ನಿ ಶಿವಮ್ಮ ನಡುವೆ ಸಲುಗೆ ಇತ್ತು. ಆಗಾಗ ಕೋಟುಮಚಗಿ ಗ್ರಾಮದ ಮನೆಗೆ ಬಂದು ಹೋಗ್ತಾಯಿದ್ದ ಎನ್ನಲಾಗಿದೆ. ಇವರಿಬ್ಬರ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿ ಆಗಿದ್ದಾನೆಂದು ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ರಾತ್ರಿ ಗಂಡನಿಗೆ ಚಿಕನ್ ಮಸಾಲಾ ತಿನಿಸಿ ಕಿರಾತಕಿ ಹೆಂಡತಿ ಮುಹೂರ್ತ ಫಿಕ್ಸ್ ಮಾಡಿದ್ದಳು. ಅದರಂತೆ ಗಂಡ ಚಿಕನ್ ಮಸಾಲಾ ಸವಿತಾಯಿದ್ದ. ಮಾಜಿ ಪ್ರೇಮಿಗಳು ಮಸಲತ್ತು ಮಾಡಿ ಹರಿತವಾದ ಆಯುಧದಿಂದ ಇರಿದು ಹತ್ಯೆ ಮಾಡಲಾಗಿದೆ.

ತಡರಾತ್ರಿ ಹತ್ಯೆ ಮಾಡಿ ಶವ ಹೆದ್ದಾರಿಯಲ್ಲಿ ಬಿಸಾಕಿ ಅಪಘಾತ ಕಥೆ ಸೃಷ್ಠಿಸಲು ಹೋಗಿದ್ದ ಹೆಂಡತಿ ಹಾಗೂ ಆಕೆ ಪ್ಲಾನ್ ಅನ್ನು ಖಾಕಿ ಡಾಗ್ ಫ್ಲಾಪ್ ಮಾಡಿದೆ. ಇದೀಗ ಇಬ್ಬರು ಹಂತಕರನ್ನು ಪೊಲೀಸರು ಬಂಧಿಸಿದ್ದು, ಕೊಲೆಗಾರ ಮಂಜುನಾಥ್ ಯಲಬುರ್ಗಾ ಕೊಪ್ಪಳ ಜಿಲ್ಲೆಯ ಭಾಗ್ಯನಗರ ನಿವಾಸಿ ಎನ್ನಲಾಗಿದೆ.

ಕೊಲೆ ಬಳಿಕ ಪಕ್ಕದಲ್ಲೇ ಇದ್ದು, ನಾಟಕ ಮಾಡಿದ ಪತ್ನಿಯನ್ನು ಪೊಲೀಸರು ಅರೆಸ್ಟ್ ಮಾಡಿ ತಮ್ಮ ಶೈಲಿಯಲ್ಲಿ ಡ್ರಿಲ್ ಮಾಡಿದಾಗ ಸತ್ಯ ಕಕ್ಕಿದ್ದಾಳೆ.

ಒಟ್ಟಾರೆ ಕೌಟುಂಬಿಕ ಕಲಹದಿಂದ ಪತಿ ಹತ್ಯೆ ಆಗಿದ್ದು, ಇದರಿಂದ ನಾಲ್ಕು ವರ್ಷದ ಕಂದ ಅನಾಥವಾಗಿದೆ.

ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here