ಬೆಂಗಳೂರು:– ನಾನು ಸಿಎಂ ಆಗ್ತೀನಿ, ಇದಕ್ಕೇನು ಸೀನಿಯಾರಿಟಿ ಬೇಕಿಲ್ಲ ಎಂದು MB ಪಾಟೀಲ್ ಹೇಳಿದ್ದಾರೆ.
Advertisement
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ನಾನು ಸಿಎಂ ಆಗ್ತೀನಿ, ವಿಜಯಪುರದಿಂದ ಸಿಎಂ ಆದ್ರೆ ನಾನೇ ಆಗೋದು. ಶಿವಾನಂದ ಪಾಟೀಲ್ ಅಂತೂ ಆಗಲ್ಲ ಎಂದರು.
ಸಿಎಂ ಆಗೋಕೆ ಸೀನಿಯಾರಿಟಿ ಬೇಕಿಲ್ಲ. ಅವರು ಜನತಾ ದಳದಿಂದ ಕಾಂಗ್ರೆಸ್ಗೆ ಬಂದಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ವಿರುದ್ಧ ವ್ಯಂಗ್ಯವಾಡಿದರು. ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಅಂತೂ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಇರ್ತಾರೆ ಅಂತಾ ಸ್ಪಷಪಡಿಸಿದ್ರು.
ಇದೇ ವೇಳೆ ಚುನಾವಣೆಗೆ ರೆಡಿಯಾಗಿ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಆಸೆ ಆಕಾಂಕ್ಷೆ ಇಟ್ಕೊಂಡಿದ್ರು. ನಾನು ಸಿಎಂ ಆಗ್ತೇನೆ ಅನ್ನೋ ಆಸೆ ಇತ್ತು ಅವರಿಗೆ. ಅತಂತ್ರ ವಿಧಾನಸಭೆ ಆಗುತ್ತೆ ಅಂದುಕೊಂಡಿದ್ರು. ಪಾಪ ಅವರ ಆಸೆ ನಿರಾಸೆಯಾಗಿದೆ ಅಂತ ತಿರುಗೇಟು ಕೊಟ್ಟಿದ್ದಾರೆ.