ಆಡಿಯೋದಲ್ಲಿ ಮಾತನಾಡಿದ್ದು ನಾನೇ, ಇದು ನನ್ನದೇ ಧ್ವನಿ: ಬಿಆರ್ ಪಾಟೀಲ್

0
Spread the love

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಬಿ.ಆರ್ ಪಾಟೀಲ್ ಆಡಿಯೋ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇನ್ನೂ ಈ ವಿಚಾರವಾಗಿ ಶಾಸಕ ಬಿ ಆರ್​ ಪಾಟೀಲ್ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ಅವರು, ಆಡಿಯೋದಲ್ಲಿ ಮಾತಾಡಿದ್ದು ನಾನೇ, ಅದು ನನ್ನದೇ ಧ್ವನಿ ಎಂದು ಹೇಳಿದ್ದಾರೆ.

Advertisement

ನಾನು ಸತ್ಯವನ್ನೇ ಹೇಳಿದ್ದೇನೆ. ಈ ಬಗ್ಗೆ ಮಾತಾಡಲು ಸಿಎಂ ಸಿದ್ದರಾಮಯ್ಯ ಅವರು ಕರೆದ್ರೆ ಖಂಡಿತ ಹೋಗ್ತೇನೆ. ಎಐಸಿಸಿಗೆ ವರದಿ ಕೊಡುವಷ್ಟರ ಮಟ್ಟಿಗೆ ನಾನು ಬೆಳೆದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಎಲ್ಲಾ ಸರ್ಕಾರಗಳಲ್ಲೂ ಭ್ರಷ್ಟಾಚಾರ ನಡೆದಿದೆ. ನಾವು ಜನಪರವಾಗಿ ಆಡಳಿತ ಕೊಡ್ತೀವಿ ಅಂತ ಹೇಳಿ ಬಂದಿದ್ದೇವೆ.

ಆದ್ರೆ ನಮ್ಮ ಸರ್ಕಾರದಲ್ಲಿ ಈ ರೀತಿ ಆಗಬಾರದಿತ್ತು ಎಂದು ಶಾಸಕ ಹೇಳಿದ್ದಾರೆ. ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here