ಬೆಂಗಳೂರು: ದ್ವೇಷದ ರಾಜಕಾರಣ ಏನು ಅಂತ ನನಗೆ ಗೊತ್ತಿಲ್ಲ. ಒಬ್ಬ ಶಾಸಕರ ಮೇಲೆ ಸುಮ್ಮನೆ ಎಫ್ಐಆರ್ ಹಾಕಲಾಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು,
ದ್ವೇಷದ ರಾಜಕಾರಣ ಏನು ಅಂತ ನನಗೆ ಗೊತ್ತಿಲ್ಲ. ಒಬ್ಬ ಶಾಸಕರ ಮೇಲೆ ಸುಮ್ಮನೆ ಎಫ್ಐಆರ್ ಹಾಕಲಾಗಲ್ಲ. ಹೇಳಿಕೆಯಲ್ಲಿ ಕಾನೂನು ವಿರೋಧಿ ಇರಬೇಕು. ಆ ರೀತಿ ಹೇಳಿಕೆ ಕೊಟ್ಟಿದ್ರೆ ಕೇಸ್ ಹಾಕಿರಬಹುದು. ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಯುತ್ತದೆ ಎಂದು ಹೇಳಿದರು.
ಇನ್ನೂ ಹನಿಟ್ರ್ಯಾಪ್ ಪ್ರಕರಣ ಮುಚ್ಚಿರುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, “ಬಿಜೆಪಿ ಆರೋಪ ನಿರಾಧಾರ. ಮುಚ್ಚಿ ಹಾಕೋದು ಅಂತ ಏನಿದೆ?. ಕೆ.ಎನ್.ರಾಜಣ್ಣ ಸಿಐಡಿಗೆ ಏನು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಕೆಲವಷ್ಟೇ ಮಾಹಿತಿ ಬಂದಿದೆ. ಅದೆಲ್ಲವೂ ಅದೇ ರೀತಿ ಇದೆ ಅನ್ನೋಕೆ ಆಗಲ್ಲ. ರಾಜಣ್ಣ ಏನು ಹೇಳಿಕೆ ಕೊಟ್ಟಿದ್ದಾರೋ, ಅದರ ಮೇಲೆ ತನಿಖೆ ಮುಂದುವರೆಯುತ್ತದೆ ಎಂದು ಹೇಳಿದರು.