ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ: ಸಿಎಂ ಸಿದ್ದರಾಮಯ್ಯ

0
Spread the love

ರಾಯಚೂರು: ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರುದೆಹಲಿಗೆ ತೆರಳಿ ರಾಷ್ಟ್ರಪತಿ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಬೇಕು ಅಂದುಕೊಂಡಿದ್ದೇನೆ. 16ನೇ ಹಣಕಾಸಿನ ಸಂಬಂಧ ಬಿಲ್​​ಗಳು ಪೆಂಡಿಂಗ್ ಇವೆ. ಅವುಗಳ ಬಗ್ಗೆ ಮಾತನಾಡಲು ನಾಳೆ ರಾಷ್ಟ್ರಪತಿ ಸಮಯ ಕೊಟ್ಟಿದ್ದಾರೆ ಎಂದು ಸಿಎಂ ತಿಳಿಸಿದರು.

Advertisement

ಇನ್ನೂ ಪ್ರಲ್ಹಾದ್ ಜೋಶಿಯವರೂ ಕೇಂದ್ರದಲ್ಲಿ ಮಂತ್ರಿ ಇದ್ದಾರೆ. ಪವರ್​​ಫುಲ್​​ ಮಂತ್ರಿ ಅಂತಾರೆ. ಪ್ರಧಾನಿಗೆ ಬಹಳ ಹತ್ತಿರ ಇದ್ದಾರೆ. ರಾಜ್ಯಕ್ಕೆ 15ನೇ ಹಣಕಾಸಿನಲ್ಲಿ 5,435 ಕೋಟಿ ವಿಶೇಷ ಅನುದಾನ ಅಂತ ಶಿಫಾರಸುಮಾಡಿದ್ದರು. ಆದರೆ ಅದನ್ನು ಬಿಡಿಸಿಕೊಟ್ಟರಾ? ಜೋಶಿ ಅವರಿಗೆ ಯಾವ ನೈತಿಕಹಕ್ಕಿದೆ.

ಕರ್ನಾಟಕದ ಬಗ್ಗೆ ಮಾತನಾಡಲು ಅವರಿಗೆ ಏನಿದೆ? ಬಿಜೆಪಿಯ ಒಬ್ಬ ಎಂಪಿ ಮಾತನಾಡಿದರಾ? ನಮಗೆ ಮೂಲ ಸೌಕರ್ಯಕ್ಕೆ 3,000 ಕೋಟಿ ರೂ., ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ರೂ., 11,495 ಕೋಟಿ ರೂ. ನಷ್ಟ ಆಯಿತು. ಒಟ್ಟು 14 ಹಾಗೂ 15ನೇ ಹಣಕಾಸಿನಲ್ಲಿ ಲೆಕ್ಕ ಹಾಕಿನೋಡಿದರೆ 80,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here