ರಾಯಚೂರು: ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ದೆಹಲಿಗೆ ತೆರಳಿ ರಾಷ್ಟ್ರಪತಿ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಬೇಕು ಅಂದುಕೊಂಡಿದ್ದೇನೆ. 16ನೇ ಹಣಕಾಸಿನ ಸಂಬಂಧ ಬಿಲ್ಗಳು ಪೆಂಡಿಂಗ್ ಇವೆ. ಅವುಗಳ ಬಗ್ಗೆ ಮಾತನಾಡಲು ನಾಳೆ ರಾಷ್ಟ್ರಪತಿ ಸಮಯ ಕೊಟ್ಟಿದ್ದಾರೆ ಎಂದು ಸಿಎಂ ತಿಳಿಸಿದರು.
ಇನ್ನೂ ಪ್ರಲ್ಹಾದ್ ಜೋಶಿಯವರೂ ಕೇಂದ್ರದಲ್ಲಿ ಮಂತ್ರಿ ಇದ್ದಾರೆ. ಪವರ್ಫುಲ್ ಮಂತ್ರಿ ಅಂತಾರೆ. ಪ್ರಧಾನಿಗೆ ಬಹಳ ಹತ್ತಿರ ಇದ್ದಾರೆ. ರಾಜ್ಯಕ್ಕೆ 15ನೇ ಹಣಕಾಸಿನಲ್ಲಿ 5,435 ಕೋಟಿ ವಿಶೇಷ ಅನುದಾನ ಅಂತ ಶಿಫಾರಸು ಮಾಡಿದ್ದರು. ಆದರೆ ಅದನ್ನು ಬಿಡಿಸಿಕೊಟ್ಟರಾ? ಜೋಶಿ ಅವರಿಗೆ ಯಾವ ನೈತಿಕ ಹಕ್ಕಿದೆ.
ಕರ್ನಾಟಕದ ಬಗ್ಗೆ ಮಾತನಾಡಲು ಅವರಿಗೆ ಏನಿದೆ? ಬಿಜೆಪಿಯ ಒಬ್ಬ ಎಂಪಿ ಮಾತನಾಡಿದರಾ? ನಮಗೆ ಮೂಲ ಸೌಕರ್ಯಕ್ಕೆ 3,000 ಕೋಟಿ ರೂ., ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ರೂ., 11,495 ಕೋಟಿ ರೂ. ನಷ್ಟ ಆಯಿತು. ಒಟ್ಟು 14 ಹಾಗೂ 15ನೇ ಹಣಕಾಸಿನಲ್ಲಿ ಲೆಕ್ಕ ಹಾಕಿ ನೋಡಿದರೆ 80,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.