ನಮ್ಮ ದೇಶಕ್ಕಾಗಿ ಈಗಲೂ ನಾನು ಸೂಸೈಡ್ ಬಾಂಬರ್ ಆಗಿ ಹೋಗ್ತೀನಿ: ಸಚಿವ ಜಮೀರ್ ಅಹ್ಮದ್

0
Spread the love

ಬೆಂಗಳೂರು: ನಮ್ಮ ದೇಶಕ್ಕಾಗಿ ಈಗಲೂ ನಾನು ಸೂಸೈಡ್ ಬಾಂಬರ್ ಆಗಿ ಹೋಗ್ತೀನಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಸೂಸೈಡ್ ಬಾಂಬರ್‌ಗೆ ಬಿಜೆಪಿ ಟೀಕೆ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಟೀಕೆ ಬಿಟ್ಟು ಇನ್ನೋನೂ ಗೊತ್ತಿಲ್ಲ. ನಾನು ದೇಶಕೋಸ್ಕರ ಬಲಿ ಆಗೋಕೆ ಸಿದ್ಧ ಅಂತ ಹೇಳಿದ್ದೇನೆ. ಈಗಲೂ ನನ್ನ ಮಾತಿಗೆ ನಾನು ಬದ್ಧ.

Advertisement

ಈಗಲೂ ಹೇಳ್ತೀನಿ ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ. ಮೋದಿ, ಅಮಿತ್ ಶಾ ಅವರು ಅನುಮತಿ ಕೊಟ್ರೆ ಸೂಸೈಡ್ ಬಾಂಬರ್ ಆಗಿ ಹೋಗೋಕೆ ಸಿದ್ಧ. ನಮ್ಮ ದೇಶಕ್ಕಾಗಿ ಈಗಲೂ ನಾನು ಸೂಸೈಡ್ ಬಾಂಬರ್ ಆಗಿ ಹೋಗ್ತೀನಿ.

ಸೈನಿಕರಿಗೆ ಹೆಚ್ಚು ಶಕ್ತಿ ಕೊಡಲಿ ಅಂತ ಅಲ್ಲಾ ಬಳಿ ಬೇಡಿ ಕೊಳ್ತೀನಿ ಎಂದು ತಿಳಿಸಿದರು. ತಿರಂಗಾ ಯಾತ್ರೆಗೆ ಬಾರದ ಬಗ್ಗೆ ಮಾತನಾಡಿ, ನಾನು ತಿರಂಗಾ ಯಾತ್ರೆಗೆ ಬರಬೇಕಿತ್ತು. ಸ್ಲಂ ಬೋರ್ಡ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬರಲು ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು.


Spread the love

LEAVE A REPLY

Please enter your comment!
Please enter your name here