ಭಾರತ ಮನಸ್ಸು ಮಾಡಿದರೆ ಕೇವಲ 2 ದಿನಗಳಲ್ಲಿ ಪಾಕಿಸ್ತಾನ ನಿರ್ನಾಮವಾಗುತ್ತದೆ: ಸಚಿವ ಜಮೀರ್ ಅಹ್ಮದ್

0
Spread the love

ಕಲಬುರಗಿ: ಭಾರತ ಮನಸ್ಸು ಮಾಡಿದರೆ ಕೇವಲ ಎರಡು ದಿನಗಳಲ್ಲಿ ಪಾಕಿಸ್ತಾನ ನಿರ್ನಾಮವಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರಿಕರನ್ನು ಯುದ್ಧಕ್ಕೆ ಕಳಿಸಲ್ಲ ಎಂಬ ಅಂಶ ಪ್ರಾಯಶಃ ಸಚಿವರಿಗೆ ಗೊತ್ತಿದ್ದಂತಿಲ್ಲ.

Advertisement

ಪಾಕಿಸ್ತಾನಕ್ಕೆ ಯಾವುದೇ ಸಾಮರ್ಥ್ಯ ಇಲ್ಲ, ಅದೊಂದು ಖಾಲಿ ಡಬ್ಬ ಮತ್ತು ಠುಸ್ ಪಟಾಕಿ ಎಂಬ ಉಪಮೆಗಳನ್ನು ಬಳಸುವ ಜಮೀರ್ ಅಹ್ಮದ್ ಭಾರತ ಮನಸ್ಸು ಮಾಡಿದರೆ ಕೇವಲ ಎರಡು ದಿನಗಳಲ್ಲಿ ಪಾಕಿಸ್ತಾನ ನಿರ್ನಾಮವಾಗುತ್ತದೆ ಎಂದರು.

ಇನ್ನೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನುಮತಿ ನೀಡಿದರೆ ತಾನು ಈಗಲೂ ಸೂಸೈಡ್ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗಲು ಸಿದ್ಧ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ತಾನು ತಯಾರು ಎಂದು ಮತ್ತೊಮ್ಮೆ ಹೇಳಿದರು.


Spread the love

LEAVE A REPLY

Please enter your comment!
Please enter your name here