ಇಡಿ ದಾಳಿಯಲ್ಲಿ ಪರಮೇಶ್ವರ್ ಪಾತ್ರ ಸಾಬೀತಾದರೆ ರಾಜೀನಾಮೆ ಕೊಡಬೇಕು: ಆರ್ ಅಶೋಕ್

0
Spread the love

ಬೆಂಗಳೂರು: ಇಡಿ ದಾಳಿಯಲ್ಲಿ ಪರಮೇಶ್ವರ್ ಪಾತ್ರ ಸಾಬೀತಾದರೆ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಒಡೆತನದ ತುಮಕೂರಿನ ಸಿದ್ದಾರ್ಥ ಕಾಲೇಜಿನ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು,

Advertisement

ಮೊದಲು ಇಡಿ ದಾಳಿ ಮುಗಿದು ತನಿಖೆ ಆಗಲಿ. ತನಿಖೆ ಪೂರ್ತಿ ಆದ ಮೇಲೆ ನಾವು ಪರಮೇಶ್ವರ್ ವಿರುದ್ಧ ಕ್ರಮಕ್ಕೆ ಆಗ್ರಹಿಸ್ತೇವೆ. ಮುಂದಿನ ಹೋರಾಟ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ. ಇಡಿ ದಾಳಿಯಲ್ಲಿ ಪರಮೇಶ್ವರ್ ಪಾತ್ರ ಸಾಬೀತಾದರೆ ರಾಜೀನಾಮೆ ಕೊಡಬೇಕು. ಈ ಬಗ್ಗೆ ಆಗ್ರಹ ಮಾಡುತ್ತೇವೆ ಎಂದು ಹೇಳಿದರು.

ಈಗ ಪರಮೇಶ್ವರ್ ಮನೆ, ಸಂಸ್ಥೆಗಳ ಮೇಲೆ ಇಡಿ ದಾಳಿ ಆಗಿದೆ. ಮುಂದೆ ಇನ್ನೂ ಯಾರ್ಯಾರ ಮೇಲೆ ದಾಳಿ ಆಗುತ್ತೋ ನೋಡಬೇಕು. ಪರಮೇಶ್ವರ್ ಅಷ್ಟೇ ಅಲ್ಲ ಇನ್ನು ಕೆಲವರು ರನ್ಯಾರಾವ್ ಲಿಂಕ್ ನಲ್ಲಿ ಇರಬಹುದು ಎಂದು ಆರೋಪ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here