ಬೆಂಗಳೂರು: ಸಿಎಂ, ಡಿಸಿಎಂ ರಾಜೀನಾಮೆ ಕೊಟ್ಟು ತೊಲಗಿದ್ರೆ ರಾಜ್ಯದಲ್ಲಿ ಬದಲಾವಣೆ ಕಾಣಬಹುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಹಣ ಕೊಡದೇ ಏನು ಆಗಲ್ಲ. ಇದು ವ್ಯಾಪಾರಕ್ಕೆ ಕೂತಿರುವ ಕಾಂಗ್ರೆಸ್ ಸಂತೆ ಸರ್ಕಾರ. ಇದು ವ್ಯಾಪಾರಕ್ಕೆ ಬಂದ ಸರ್ಕಾರ ಇದು.
Advertisement
ನಮ್ಮ ಮೇಲೆ 40% ಪೇ ಸಿಎಂ ಅಂದರು, ಯೋಗ್ಯತೆಗೆ ಅದನ್ನ ಪ್ರೂವ್ ಮಾಡಿಲ್ಲ. ಸಿಎಂ, ಡಿಸಿಎಂಗೆ ನಾಚಿಕೆ ಆಗಲ್ವಾ. ಮಂತ್ರಿಗಳು ರಾಜೀನಾಮೆ ಕೊಡೋ ಬದಲು ಸಿಎಂ, ಡಿಸಿಎಂ ರಾಜೀನಾಮೆ ಕೊಟ್ಟು ತೊಲಗಿದರೆ ಬದಲಾವಣೆ ಕಾಣಬಹುದು. ಇವರೇ ಇದ್ದರೆ ಇವರು ಲೂಟಿ, ದರೋಡೆಗೆ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.