ಕೋಲಾರ: ಸಮೀಕ್ಷೆ ವರದಿ ಅನುಷ್ಟಾನವಾದ್ರೆ ಎಲ್ಲರಿಗೂ ರಿಸವರ್ವೇಷನ್ ಹೆಚ್ಚಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಸತ್ಯದ ಆಧಾರದ ಮೇಲೆ ಚರ್ಚೆಗೆ ಸಿದ್ದ ಸಮೀಕ್ಷೆ ವರದಿ ಅನುಷ್ಟಾನವಾದ್ರೆ ಎಲ್ಲರಿಗೂ ರಿಸವರ್ವೇಷನ್ ಹೆಚ್ಚಾಗಲಿದೆ, ಆದ್ರೆ ಕೆಲವರು ನಮ್ಮದೆ ಜಾಸ್ತಿ ಎನ್ನಲು ಹೊರಟಿದ್ದಾರೆ ಎಂದ್ರು.
ವಕ್ಕಲಿಗರಿಗೆ 3 ಎ ನಲ್ಲಿ ಮೀಸಲಾತಿ ಇರುವುದು ಶೇ.4 ಮಾತ್ರ ಆದ್ರೆ ಶೇ.7 ಕ್ಕೆ ಏರಿಕೆಯಾಗಲಿದೆ, ಲಿಂಗಾಯತರಿಗೆ 3 ಬಿ ಯಲ್ಲಿ ಶೇ.5 ರಷ್ಟಿದೆ ಆದ್ರೆ 8 ಕ್ಕೆ ಹೆಚ್ಚು ಮಾಡಲು ಶಿಫಾರಸು ಮಾಡಲಾಗಿದೆ, ವರದಿ ಅನುಷ್ಟಾನವಾದ್ರೆ ಎಲ್ಲರಿಗೂ ರಿಸವರ್ವೇಷನ್ ಹೆಚ್ಚಾಗಲಿದೆ,
ವಕ್ಕಲಿಗರು ಹಾಗೂ ಲಿಂಗಾಯತರಿಗೆ ಶೇ 3 ರಷ್ಟು ಹೆಚ್ವಾಗಿದೆ. ಹಿಂದುಳಿದ ವರ್ಗ, ಅತಿ ಹಿಂದುಳಿದ ವರ್ಗ, ಅತ್ಯಂತ ಹಿಂದುಳಿದ ಮೂರು ವರ್ಗಗಳಿಗೂ ಅನುಕೂಲವಾಗಲಿದೆ ಕಾನೂನಿನ ಚೌಕಟ್ಟಿನಲ್ಲಿ ಎಲ್ಲರ ವಾದ ಮಾಡಬಹುದು ಎಂದು ಹೇಳಿದರು.