ಮನುಷ್ಯನಿಗೆ ರಕ್ತದೊತ್ತಡ ಅಂದ್ರೆ ಬಿಪಿ ಯಾವಾಗಲೂ ನಾರ್ಮಲ್ ಆಗಿರಬೇಕು. ಅದು ಹೆಚ್ಚೂ ಆಗಲೂ ಬಾರದು ಅಥವಾ ಕಡಿಮೆ ಆಗಲೂ ಬಾರದು.. ಒಂದು ವೇಳೆ ಇದರಲ್ಲಿ ವ್ಯತ್ಯಾಸವಾದರೆ ಅದರ ನೇರ ಪರಿಣಾಮ, ನಮ್ಮ ಪುಟ್ಟ ಹೃದಯದ ಮೇಲೆ ಉಂಟಾಗುತ್ತದೆ. ಹೀಗಾಗಿ ಆದಷ್ಟು ಈ ವಿಷ್ಯದಲ್ಲಿ ಎಚ್ಚರಿಕೆ ವಹಿಸಿದ್ರೆ ಬಹಳ ಒಳ್ಳೆಯದು.
Advertisement
ಬದಲಾದ ಜೀವನಶೈಲಿ ಮತ್ತು ಆಹಾರಪದ್ಧತಿ ಹಾಗೂ ಇಂದಿನ ಒತ್ತಡಮಯ ಜೀವನದಿಂದ ಅನೇಕರು ಬಿಪಿ, ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲೋ ಬಿಪಿ ಮತ್ತು ಹೈ ಬಿಪಿ ಅನೇಕರನ್ನು ಇನ್ನಿಲ್ಲದಂತೆ ಕಾಡುತ್ತವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಜೀವನಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಿಪಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹುಮುಖ್ಯ.
- ಎರಡು ಚಮಚ ಮೆಂತ್ಯ ಕಾಳುಗಳನ್ನು ಸ್ವಲ್ಪ ನೀರಿನಲ್ಲಿ ಕುದಿಸಿ, ಆರಿಸಿದ ನಂತರ ಅವುಗಳನ್ನು ಫಿಲ್ಟರ್ ಮಾಡಿ ಸೇವಿಸಬೇಕು. ಮೆಂತ್ಯವು ಪೊಟ್ಯಾಸಿಯಮ್ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ. ಇದು ಅಧಿಕ ರಕ್ತದೊತ್ತಡದಿಂದ ತ್ವರಿತ ಪರಿಹಾರ ನೀಡುತ್ತದೆ.
- ಜೇನುತುಪ್ಪವು ಅಧಿಕ ರಕ್ತದೊತ್ತಡವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ ಎರಡು ಚಮಚ ಜೇನುತುಪ್ಪವನ್ನು ಸೇವಿಸುವುದು ಉತ್ತಮ. ನೀವು ತುಳಸಿ ರಸ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬಹುದು.
- ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಮುಕ್ತಿ ಪಡೆಯಲು ದಿನಕ್ಕೆ ಎರಡು ಬಾಳೆಹಣ್ಣು ತಿನ್ನುವುದು, ಶುಂಠಿಯನ್ನು ದಿನನಿತ್ಯದ ಆಹಾರದಲ್ಲಿ ಸೇವಿಸುವುದು ಉತ್ತಮ.
- ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.