ಅಕ್ರಮವಾಗಿ ಜಾನುವಾರು ಸಾಗಾಣಿಕೆ: ಆರೋಪಿಗಳ ಬಂಧನ

0
Spread the love

ಚಾಮರಾಜನಗರ: ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತೆರಕಣಾಂಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ತೆರಕಣಾಂಬಿಯ ನಯಾಜ್  (26), ರೋಷನ್  (27) ಬಂಧಿತ ಆರೋಪಿಗಳಾಗಿದ್ದು, ತೆರಕಣಾಂಬಿ ಹೋಬಳಿಯ ಸೋಮನಪುರ ಕಡೆಯಿಂದ ಮಾದಲವಾಡಿ ಮಾರ್ಗವಾಗಿ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದರು.

Advertisement

ಖಚಿತ ಮಾಹಿತಿ ಮೇರೆಗೆ ಈ ವೇಳೆ ತೆರಕಣಾಂಬಿಯ ಪೊಲೀಸರಿಂದ ದಿಡೀರ್ ದಾಳಿ ಮಾಡಿದ್ದು, ಗೂಡ್ಸ್‌ ವಾಹನ ತಡೆದು ಪರಿಶೀಲಿಸಿದ್ದಾರೆ. ವಾಹನದಲ್ಲಿ ಎರಡು ಎತ್ತು ಹಾಗೂ ಒಂದು ಕರು ಇರುವುದು ಕಂಡುಬಂದಿದೆ. ಕೂಡಲೆ ಮಾಲು ಸಮೇತ ಆರೋಪಿಗಳನ್ನು ಬಂಧಿಸಿ ತೆರಕಣಾಂಬಿ ಪೋಲೀಸ್ ಠಾಣೆಯಲ್ಲಿ  ಪ್ರಕರಣ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here