ಹೆಚ್ಚಿದ ಬಿಸಿಲಿನ ತಾಪಮಾನ: ಕೆರೆಯಲ್ಲಿ ಕೋತಿಗಳ ಈಜಾಟ!

0
Spread the love

ಚಿತ್ರದುರ್ಗ:- ಒಂದೆಡೆ ಕರ್ನಾಟಕದ ಹಲವೆಡೆ ಜೋರು ಮಳೆ ಆಗುತ್ತಿದ್ರೆ, ಇನ್ನೂ ಹಲವೆಡೆ ಬಿಸಿಲಿನ ತಾಪ ತಾಳಲಾರದೇ ಪ್ರಾಣಿ-ಪಕ್ಷಿಗಳು ಸೇರಿ ಜನರು ಬಳಲುತ್ತಿದ್ದಾರೆ.

Advertisement

ಅದರಂತೆ ಚಿತ್ರದುರ್ಗದಲ್ಲಿ ಬಿಸಿಲ ಝಳದಿಂದ ಬಸವಳಿದ ಕೋತಿಗಳು ಕೆರೆಯಲ್ಲಿ ಈಜಾಡುವ ಮೂಲಕ ದಣಿವಾರಿಸಿಕೊಂಡ ಘಟನೆ ಜರುಗಿದೆ. ಚಂದ್ರವಳ್ಳಿ ತೋಟ ಎಂದೇ ಹೆಸರಾಗಿರುವ ಈ ರಮಣೀಯ ಪ್ರವಾಸಿ ತಾಣದಲ್ಲೀಗ ಕೋತಿಗಳ ಕಲರವ ಶುರುವಾಗಿದೆ.ಬಿಸಿಲಿನ ಬೇಗೆ ತಾಳಲಾರದೇ ಹಿಂಡು ಹಿಂಡು ಕೋತಿಗಳು ಚಂದ್ರವಳ್ಳಿ ಕೆರೆಗೆ ಲಗ್ಗೆ ಇಟ್ಟಿವೆ. ಕದಂಬರ ಅರಸ ಮಯೂರ ವರ್ಮ ಕಟ್ಟಿಸಿರುವ ಕೆರೆಯಲ್ಲಿ ಈಜುತ್ತಾ, ನೀರಾಟ ಆಡುತ್ತಾ ಬಿಸಿಲಿನ ಧಗೆ ಕಡಿಮೆ ಮಾಡಿಕೊಳ್ಳುತ್ತಿವೆ.

ಕೋತಿಗಳ ಈ ನೀರಾಟದ ದೃಶ್ಯ ಪ್ರವಾಸಿಗರಿಗೆ ಹೊಸ ಮನರಂಜನೆಯಾಗಿದೆ. ಥೇಟ್ ಮನುಷ್ಯರಂತೆಯೇ ನೀರಲ್ಲಿ ಈಜಾಡುವ ಕೋತಿಗಳ ಈ ದೃಶ್ಯವನ್ನು ಇಲ್ಲಿಗೆ ಬರುವ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ಮನುಷ್ಯರಂತೆ ಕಲ್ಲ ಮೇಲಿಂದ ನೀರಿಗೆ ಡೈವ್ ಹೊಡೆಯುವ ಕೋತಿ ನೀರೊಳಗೆ ಕೀಟಲೆ ಮಾಡುತ್ತಾ ಒಂದು ಕಡೆ ಮುಳುಗಿ, ಮತ್ತೊಂದೆಡೆ ಎದ್ದು ಹೋಗುವ ಮಂಗಣ್ಣಗಳ ಕುಚೇಷ್ಟೆ ಹಾಗೂ ಥೇಟ್ ಮನುಷ್ಯರಂತೆ ನೀರಿಗೆ ಹಾರುವ ಸಾಹಸ ನೋಡಿ ಪುಳಕಿತರಾದರು.


Spread the love

LEAVE A REPLY

Please enter your comment!
Please enter your name here