ಗದಗ: ಪಾಕಿಸ್ತಾನ ಮತ್ತು ಅದು ಸಲಹುತ್ತಿರುವ ಉಗ್ರರಿಗೆ ಪಾಠ ಕಲಿಸುವ ಕೆಲಸವನ್ನು ಭಾರತೀಯ ಸೇನೆ ನಿನ್ನೆ ರಾತ್ರಿಯಿಂದ ಆರಂಭಿಸಿದೆ ಮತ್ತು ಮೊದಲ ದಾಳಿಯಲ್ಲೇ ಉಗ್ರರ ಹಲವಾರು ನೆಲೆಗಳು ಧ್ವಂಸಗೊಂಡಿವೆ. ಅದರಿಂದ ಗದಗನಲ್ಲಿ ಮಾಜಿ ಸೈನಿಕರ ಸಂಭ್ರಮ ಮನೆಮಾಡಿದ್ದು, ಮಾಜಿ ಸೈನಿಕರು ಸೇನಾ ಕಾರ್ಯಾಚರಣೆಯನ್ನು ಸಿಹಿ ಹಂಚುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸೈನಿಕರು, ಉಗ್ರರ ನೆಲೆಗಳನ್ನು ನೆಲಸಮ ಮಾಡುವ ಕೆಲಸ ಭಾರತದ ಸೇನೆ ಶುರುಮಾಡಿದ್ದು ಬಹಳ ಖುಷಿಯಾಗುತ್ತಿದೆ, ಪಾಪಿ ಪಾಕಿಸ್ತಾನದ ನೀಚ ಕೃತ್ಯಗಳಿಗೆ ಕಡಿವಾಣ ಹಾಕಲೇಬೇಕಿತ್ತು, ಭಾರತದ ಬಲಿಷ್ಠ ಸೇನೆಯನ್ನು ಎದುರು ಹಾಕಿಕೊಳ್ಳುವ ಕೆಲಸ ಅದು ಮಾಡಿದೆ, ಹೇಡಿಗಳಿಗೆ ತಕ್ಕ ಶಾಸ್ತಿಯಾಗಲಿದೆ ಎಂದರು.
ಅದಲ್ಲದೆ ಎಷ್ಟೋ ಬಾರಿ ಯುದ್ದದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದಿದ್ದೇವೆ. ಭಾರತದ ಜೊತೆಗೆ ಯುದ್ಧ ಮಾಡಿದ್ರೆ ಅರ್ಧ ಪಾಕಿಸ್ತಾನ ಮುಳುಗುತ್ತೆ ಅನ್ನೋ ಭಯ ಇದೆ. ಭಾರತ ಮಾತೆ ಮೇಲೆ ಕಣ್ಣು ಹಾಕಿದವ್ರನ್ನು ಸುಮ್ಮೆ ಬಿಡಬಾರದು ಎಂದು ಹೇಳಿದರು.