ಸದನದಲ್ಲಿ ಚರ್ಚೆ ಮಾಡುವ ಬದಲು ಆಡಳಿತ ಪಕ್ಷ ಪಲಾಯನ ಮಾಡಲು ಪ್ರಯತ್ನಿಸುತ್ತಿದೆ: ಆರ್ ಅಶೋಕ್‌

0
Spread the love

ಬೆಳಗಾವಿ: ಸದನದಲ್ಲಿ ಚರ್ಚೆ ಮಾಡುವ ಬದಲು ಆಡಳಿತ ಪಕ್ಷ ಪಲಾಯನ ಮಾಡಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್‌ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸದನದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ಆಗಬೇಕಿದೆ, ಮುಡಾ ಹಗರಣದಲ್ಲಿ ಖುದ್ದು ಮುಖ್ಯಮಂತ್ರಿಯವರೇ ಸಿಕ್ಹಾಕಿಕೊಂಡಿದ್ದಾರೆ.

Advertisement

ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರದ ಚರ್ಚೆಯಾಗಬೇಕಿದೆ, ಅಬಕಾರಿ ₹ 700 ಕೋಟಿ ಅವ್ಯವಹಾರ ವರದಿಯಾಗಿದೆ, ವಕ್ಫ್ ಬೋರ್ಡ್ ಭೂಕಬಳಿಕೆಯಿಂದ ರೈತರು ಕಂಗಾಲಾಗಿದ್ದಾರೆ- ಚರ್ಚೆ ನಡೆಸುವ ಬದಲು ಸರ್ಕಾರ ಪಲಾಯನ ಮಾಡುವ ಪ್ರಯತ್ನಿಸುತ್ತಿದೆ ಎಂದರು.

 


Spread the love

LEAVE A REPLY

Please enter your comment!
Please enter your name here