ಕೊಲೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಆದರೆ ರಿಯಲ್ ಫಾಕ್ಟ್ಸ್ ಗೊತ್ತಾಗುತ್ತಿಲ್ಲ: ಎಸ್ ಎಸ್ ಮಲ್ಲಿಕಾರ್ಜುನ್

0
Spread the love

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಡಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಕೊಲೆ ನಡೆದಿರುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಆದರೆ ರಿಯಲ್ ಫಾಕ್ಟ್ಸ್ ಗೊತ್ತಾಗುತ್ತಿಲ್ಲ, ಪೊಲೀಸ್ ನವರು ಫ್ಯಾಮಿಲಿ ಡಿಸ್ಪ್ಯೂಟ್ ಅಂತ ಹೇಳುತ್ತಿದ್ದಾರೆ. ಇಲಾಖೆಯಿಂದ ಯಾವುದೇ ಇಸ್ಸ್ಯೂಗಳು ಇರಲಿಲ್ಲ. ಹೀಗಾಗಿ ಇದು ಏನು ಅಂತ ಗೊತ್ತಾಗುತ್ತಿಲ್ಲ. ತನಿಖೆಯಿಂದಲೇ ಗೊತ್ತಾಗಬೇಕು ಎಂದು ಹೇಳಿದರು.

ಇನ್ನೂ ಅವರಿಗೆ ತೀರ್ಥಹಳ್ಳಿಯಲ್ಲಿ ಒಂದು ಮಗುವಿದೆ. ಫ್ಯಾಮಿಲಿ ಜೊತೆ ಸರಿ ಇರಲಿಲ್ಲ ಅಂತಾನು ಹೇಳುತ್ತಿದ್ದಾರೆ. ಹೀಗಾಗಿ ಇದು ಗೊಂದಲವಾಗಿದೆ, ಪೂರ್ಣ ತನಿಖೆಯಾಗಬೇಕಿದೆ.

ಅಕ್ರಮ ಗಣಿಗಾರಿಕೆ ಇಸ್ಸ್ಯೂ ಇದ್ರೆ ನೋಡೊಣ. ಕಾರ್ ಡ್ರೈವರ್ ನನ್ನ ರಿಲ್ಯೂವ್ ಮಾಡಿದ್ದರು ಎಂಬ ಮಾಹಿತಿ ಇದೆ. ಯಾರ‌್ಯಾರು ಸಂಪರ್ಕದಲ್ಲಿದ್ದರು  ಇದೆಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ಪ್ರತಿಮಾ ಒಳ್ಳೆಯ ಆಫೀಸರ್ ಆಗಿದ್ದರು. ನಿನ್ನೆ ವಿಡಿಯೋ ಕಾನ್ಫರೆನ್ಸ್  ಮೀಟಿಂಗ್ ಕೂಡ ಮಾಡಿದ್ದಾರೆ. ಪ್ರತ್ಯೇಕವಾಗಿ ಅವರದ್ದು ಏನಿದೆಯೋ ಗೊತ್ತಿಲ್ಲ. ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಮಾಡುತ್ತಾರೆ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು.


Spread the love

LEAVE A REPLY

Please enter your comment!
Please enter your name here