ಬಳ್ಳಾರಿ: ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲುರನ್ಮು ಕರೆದುಕೊಳ್ಳಬೇಕೆಂದು ಮಾತಾಡ್ತಿದ್ದಾರೆ ಎಂಬ ರೆಡ್ಡಿ ಹೇಳಿಕೆ ವಿಚಾರವಾಗಿ ಸತೀಶ್ ಅವರನ್ನ ತೊಂದ್ರೆ ಕೊಡೋದಕ್ಕೆ ಡಿಕೆಶಿ ನನ್ನ ಬಳಕೆ ಮಾಡಿಕೊಳ್ತಾರೆ ಅನ್ನೋದು ಸುಳ್ಳು ಸೃಷ್ಟಿ ಎಂದು ಮಾಜಿ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿಯನ್ನ ಮಟ್ಟ ಹಾಕೋದಕ್ಕೆ ನಾನ್ಯಾರು? ಕಾಂಗ್ರೆಸ್ ನಲ್ಲೂ ವಾಲ್ಮೀಕಿ ಸಮುದಾಯದ ನಾಯಕರಿದ್ದಾರೆ. ನಾನು ಸೋತಿದ್ದರೂ ನನ್ನ ಪಾರ್ಟಿಯಲ್ಲಿ ಪ್ರಬಲವಾಗಿದ್ದೇನೆ. ಸತೀಶ್ ಅವರನ್ನ ತೊಂದ್ರೆ ಕೊಡೋದಕ್ಕೆ ಡಿಕೆಶಿ ನನ್ನ ಬಳಕೆ ಮಾಡಿಕೊಳ್ತಾರೆ ಅನ್ನೋದು ಸುಳ್ಳು ಸೃಷ್ಟಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಕಳಂಕ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಇದನ್ನ ಸ್ಪಷ್ಟವಾಗಿ ಹೇಳಿದೆ, ನನಗೆ ಅಪಮಾನ ಮಾಡ್ತಿದ್ದೀರಿ. ಎರಡು ಬಾರಿ ಸೋತಿದ್ದೇನೆ. ಗಾಯದ ಮೇಲೆ ಬರೆ ಎಳೆಯಬೇಡಿ ಎಂದು ಸಭೆಯಿಂದ ಎದ್ದು ಹೋಗಲು ಮುಂದಾದೆ, ಆಗ ನಮ್ಮ ನಾಯಕರು ಇದು ಶೋಭೆಯಲ್ಲ ಎಂದು ನನ್ನ ಸಮಾಧಾನ ಮಾಡಿದ್ರು ಎಂದು ಹೇಳಿದರು.