ಹಿಂದೂಗಳ ರಕ್ಷಣೆಗೆ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ ಬಂದಿದೆ: ಶಾಸಕ ಯತ್ನಾಳ್‌ ಹೊಸ ಬಾಂಬ್‌

0
Spread the love

ವಿಜಯಪುರ: ಹಿಂದೂಗಳ ರಕ್ಷಣೆಗೆ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ ಬಂದಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್‌ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಆಗಲ್ಲ. ಆದ್ದರಿಂದ ಹಿಂದೂಗಳ ರಕ್ಷಣೆಗೆ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ ಬಂದಿದೆ ಎಂದು ಹೇಳಿದ್ದಾರೆ.

Advertisement

ವಿಜಯೇಂದ್ರ ಒಬ್ಬ ಮಹಾ ಭ್ರಷ್ಟ. ಇವನನ್ನು ನಮ್ಮ ಮೇಲೆ ಏಕೆ ಹೇರುತ್ತಿರಿ? ಇವನಿಂದಾಗಿ ಬಿಎಸ್‌ವೈ ಜೈಲಿಗೆ ಹೋಗಬೇಕಾಯಿತು. ನಕಲಿ ಸಹಿ ಮಾಡಿದ ಆರೋಪ ವಿಜಯೇಂದ್ರ ಮೇಲೆ ಇದೆ. 40% ಸೇರಿದಂತೆ ಸಾಕಷ್ಟು ಹಗರಣಗಳಲ್ಲಿ ವಿಜಯೇಂದ್ರ ಹೆಸರಿದೆ.

ಹೀಗೆ ಹಗರಣ ಮಾಡಿರುವ ಒಂದು ಕುಟುಂಬವನ್ನ ಪಕ್ಷದಲ್ಲಿ ಮುಂದುವರೆಸುದಾದರೆ ಹಿಂದುತ್ವವಾದಿಗಳು ಹಿಂದೂ ಜನತೆ ಒಂದು ನಿರ್ಣಯ ಕೈಗೊಳ್ಳಬೇಕಾಗುತ್ತೆ. ಆ ಬಗ್ಗೆ ಇಂದಿನಿಂದಲೇ ಆ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸುತ್ತೇವೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here