ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರತೆಗೆದು ಅದನ್ನು ಜಗತ್ತಿಗೆ ಪರಿಚಯಿಸುವದಕ್ಕೆಂದೇ ಸ್ಪರ್ಧೆಗಳಿರುತ್ತವೆ. ಈ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯ ಎಂದು ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕ ಜೆ.ಎ. ಪಾಟೀಲ ಹೇಳಿದರು.

Advertisement

ವಿಶೇಷ ಅಗತ್ಯತೆಯುಳ್ಳ ಮಕ್ಕಳ ದಿನಾಚರಣೆ ನಿಮಿತ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಸ್ಪರ್ಧೆಯನ್ನು ಎಂದಿಗೂ ಸ್ಪರ್ಧಾತ್ಮಕವಾಗಿಯೇ ನೋಡಬೇಕು. ನನಗೆ ಬಹುಮಾನ ಬರಲಿಲ್ಲ ಎಂದು ಎಂದಿಗೂ ಕೊರಗದೆ ಮತ್ತೆ ಮತ್ತೆ ಪ್ರಯತ್ನಿಸಿ ಬಹುಮಾನ ಪಡೆಯಲು ಪ್ರಯತ್ನಿಸಬೇಕು. ನಿಮಗೆ ಯಾವ ವಿಷಯದಲ್ಲಿ, ಯಾವ ಕಲೆಯಲ್ಲಿ ಆಸಕ್ತಿಯಿದೆಯೋ ಅದೇ ಕಲೆಯಲ್ಲಿ, ವಿಷಯದಲ್ಲಿ ಸತತ ಸಾಧನೆ ಮಾಡಿದರೆ ಒಂದಲ್ಲ ಒಂದು ದಿನ ನೀವು ಗೆದ್ದೇ ಗೆಲ್ಲುತ್ತೀರಿ. ಈ ಆತ್ಮ ವಿಶ್ವಾಸವನ್ನು ನೀವು ನಿಮ್ಮಲ್ಲಿ ಯಾವಾಗಲೂ ಹೊಂದಿರಬೇಕೆAದು ಹೇಳಿದರು.

ಮುಖ್ಯ ಶಿಕ್ಷಕ ಬಿ.ಬಿ. ಕುರಿ ಬಹುಮಾನಗಳನ್ನು ವಿತರಿಸಿ, ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಅದನ್ನು ನೀವು ಮಾಡಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ ಎಂದರು.

ವಿಶೇಷ ಮಕ್ಕಳ ದಿನಾಚರಣೆ ನಿಮಿತ್ತ ಇಕೋ ಕ್ಲಬ್ ವತಿಯಿಂದ ನಡೆದ ಪರಿಸರ ಕುರಿತ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here